News Karnataka Kannada
Sunday, May 05 2024
ಮಂಗಳೂರು

ಹಿಂದುಗಳ ಮೇಲೆ ಹಲ್ಲೆಗಳು, ಹತ್ಯೆ ಹೆಚ್ಚಾಗಿದೆ : ಸಿದ್ದು ವಿರುದ್ಧ ಕಟೀಲ್‌ ಕಿಡಿ

ನಗರದಲ್ಲಿ ಸಿದ್ದರಾಮಯ್ಯ ಸರಕಾರದ ವಿರುದ್ಧ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
Photo Credit : NewsKarnataka

ಮಂಗಳೂರು: ನಗರದಲ್ಲಿ ಸಿದ್ದರಾಮಯ್ಯ ಸರಕಾರದ ವಿರುದ್ಧ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರಕಾರ ಬಂದ ಮೇಲೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ್ರೆ, ಆತಂಕವಾದ ತಾಂಡವವಾಡುತ್ತೆ. ವಿಧಾನ ಸೌಧದಲ್ಲೂ ಪಾಕಿಸ್ತಾನ ಜಿಂದಾಬಾದ್ ಮೊಳಗಿತು. ಹಿಂದುಗಳ ಮೇಲೆ ಅತೀ ಹೆಚ್ಚು ಹತ್ಯೆ ಹಲ್ಲೆಗಳು ಆರಂಭವಾಗಿದೆ.

ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಮಗಳ ಹತ್ಯೆ ನಡೆದಿದೆ. ಹತ್ಯೆಯ ಹಿನ್ನಲೆಯನ್ನ ತನಿಖೆ ಮಾಡುವ ಮುಂಚೆಯೇ ಸಿದ್ದರಾಮಯ್ಯ ಹಗುರ ವಾಗಿರುವ ಹೇಳಿಕೆ ಕೊಡ್ತಾರೆ. ಇದು ಸಿದ್ದರಾಮಯ್ಯನವರ ಇವತ್ತು ನಿನ್ನೆಯ ಶೈಲಿಯಲ್ಲ. ಮಂಗಳೂರಲ್ಲಿ ಕುಕ್ಕರ್ ಬಾಂಬ್ ಸ್ಫೋಟವಾದಗ ಡಿಕೆ ಶಿವಕುಮಾರ್ ಇದೆ ರೀತಿ ಹೇಳಿಕೆ ಕೊಟ್ಟಿದ್ರು. ತನಿಖೆಯಲ್ಲಿ ಸಾಬೀತಾದ ಬಳಿಕ ವಿಷಯಂತರ ಮಾಡಿದ್ರು. ಕೃತ್ಯಗಳ ಹಿಂದಿನ ತನಿಖೆ ಮಾಡುವ ಬದಲು ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ಡಿಜೆ ಹಳ್ಳಿ, ಕೆಜಿ ಹಳ್ಳಿ, ರಾಮೇಶ್ವರಂ ಕೆಫೆ ಬ್ಲಾಸ್ಟ್ ಆದಾಗ ತಿರುಚುವ ಕೆಲಸ ಮಾಡಿತ್ತು. ಅಖಂಡ ಶ್ರೀನಿವಾಸ್ ಮೂರ್ತಿಯವರ ಮನೆ ಮೇಲೆ ದಾಳಿಯಾದಗ. ಅವರ ಮನೆಗೆ ಯಾವುದೇ ಕಾಂಗ್ರೆಸ್ ಮುಖಂಡ ಹೋಗಿಲ್ಲ. ನೇಹಾ ಹತ್ಯೆಯಾಗಿದೆ ಅವರದ್ದೇ ಪಕ್ಷದ ಕಾರ್ಪೋರೇಟರ್ ಮಗಳು. ಮನೆಗೆ ಹೋಗಿ ಸಾಂತ್ವನ ಹೇಳುವ ಕೆಲಸವನ್ನ ಮಾಡಿಲ್ಲ. ಪ್ರಕರಣವನ್ನ ಸಿಬಿಐಗೆ ವಹಿಸಬೇಕು ಎಂದು ನಾವು ಅಗ್ರಹಿಸುತ್ತೇವೆ.

ನಮ್ಮ ಸರಕಾರ ಇದ್ದಾಗ ಶಿವಮೊಗ್ಗ ಹರ್ಷ ಹತ್ಯೆಯಾದಗ, ಪ್ರವೀಣ್ ನೆಟ್ಟಾರ್ ಹತ್ಯೆ ಆದಾಗ ತಕ್ಷಣ ಪರಿಹಾರ ನೀಡುವ ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ಜೊತೆ ಎಸ್ ಡಿ ಪಿ ಐ ಒಳ ಸಂಬಂಧ ಇರಿಸಿಕೊಂಡಿದೆ. ಇವತ್ತು ಪಿ ಎಫ್ ಐ ನಿಷೇಧವಾಗಿದೆ..ಇದರಿಂದ ಹತ್ಯೆಗಳು ನಿಯಂತ್ರಣಕ್ಕೆ ಬಂದಿತ್ತು. ಈಗ ಸಿದ್ದರಾಮಯ್ಯ ಸರಕಾರದ ತುಷ್ಠಿಕರಣದಿಂದ ಮತ್ತೆ ಇಂತಹ ಹತ್ಯೆಗಳು ಜಾಸ್ತಿಯಾಗುತ್ತಿದೆ. ತುಷ್ಠಿಕರಣದಿಂದ ನೀತಿಯಿಂದಾಗಿ ಇವತ್ತು ಇಲ್ಲಿನ ಬಹುಸಂಖ್ಯಾತ ಹಿಂದುಗಳಿಗೆ ಬದುಕು ಕಷ್ಟವಾಗಿದೆ.

ಹತ್ಯೆಯಾದ್ರೆ ಹತ್ಯೆಯ ತನಿಖೆಯನ್ನ ಕಾಂಗ್ರೆಸ್ ಮಾಡ್ತಾಯಿಲ್ಲ. ಎನ್ ಐ ಎ ಸಕ್ರಿಯವಾಗಿರೋದ್ರಿಂದ ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ತನಿಖೆಯಾಗಿದೆ. ಕಾಂಗ್ರೆಸ್ ಇದ್ದಿದ್ರೆ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ ಹಳ್ಳ ಹಿಡಿಯುತ್ತಿತ್ತು. ನೇಹಾ ಕುಟುಂಬದವರಿಗೂ ಪರಿಹಾರ ನೀಡುವ ಕೆಲಸ ಮಾಡಬೇಕು. ಕಾಂಗ್ರೆಸ್ ಕೈ ಗೆ ಚೊಂಬು,, ನೀವು ಈ ರಾಜ್ಯಕ್ಕೆ ಬಾಂಬ್ ಕೊಟ್ಟವರು ಅದಕ್ಕೆ ನಿಮಗೆ ಚೊಂಬು. ನಮ್ಮ ಶಾಸಕರಿಗೆ ನೀವು ಕೊಟ್ಟ ಅನುದಾನ ಎಷ್ಟು ಬಹಿರಂಗ ಪಡಿಸಿ. ಅವ್ರ ಪಕ್ಷದ ಶಾಸಕನ ನಿಧಿಯೇ ಕೊಟ್ಟಿಲ್ಲ. ಗ್ಯಾರಂಟಿಯನ್ನ ಸಮರ್ಪಕವಾಗಿ ನೀಡುತ್ತಿಲ್ಲ.

ಮುಂದಿನ ಒಂದು ವರ್ಷದಲ್ಲಿ ಕರ್ನಾಟಕ ದಿವಾಳಿಯಾಗುತ್ತೆ. ಕೇರಳ ರಾಜ್ಯ ದಿವಾಳಿಯಾದಗ ಹಾಗೆ ಕರ್ನಾಟಕವೂ ದಿವಾಳಿಯಾಗುತ್ತೆ. 80% ಸರಕಾರ ಇದು, ಇದನ್ನ ಗುತ್ತಿಗೆದಾರರೇ ಹೇಳುತ್ತಿದ್ದಾರೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು