News Karnataka Kannada
Monday, May 13 2024
ಮಂಗಳೂರು

ಬಿಜೆಪಿಯಲ್ಲಿ ಹಣವೇ ಪ್ರಧಾನ ಆಗಿದ್ರೆ ಬಡ ಮಹಿಳೆಯಾದ ಭಾಗೀರಥಿ ಮುರುಳ್ಯಗೆ ಟಿಕೆಟ್ ಸಿಗ್ತಾ ಇರಲಿಲ್ಲ

Bhagirathi Murulya, a poor woman, would not have got a ticket if money was the dominant factor in the BJP
Photo Credit : News Kannada

ಮಂಗಳೂರು: ಟಿಕೆಟ್ ಗಾಗಿ ಚೈತ್ರಾ ಕುಂದಾಪುರ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಗೆದಷ್ಟು ವಿಚಾರಗಳು ಬಯಲಾಗುತ್ತಿದೆ. ದಿನಕ್ಕೊಂದು ರೋಚಕ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ರಾಜಕೀಯ ನಾಯಕರು ಈ ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ.

ಇದೀಗ ಮಂಗಳೂರಿನಲ್ಲಿ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಈ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿ “ಹಣವೇ ಬಿಜೆಪಿಯಲ್ಲಿ ಪ್ರಧಾನ ಅಲ್ಲ ಎಂದಿದ್ದಾರೆ. ಹಾಗಾದ್ರೆ ಬೈಂದೂರಿನ ಟಿಕೆಟ್ ಬಡ ಕಾರ್ಯಕರ್ತನಿಗೆ ಸಿಗ್ತಾ ಇರಲಿಲ್ಲ” ಎಂದಿದ್ದಾರೆ.

ಹಣದಲ್ಲೇ ಎಲ್ಲವನ್ನೂ ಅಳೆಯೋದಾದ್ರೆ ಸುಳ್ಯದಲ್ಲಿ ಸಾಮಾನ್ಯ ಕಾರ್ಯಕರ್ತೆ ಹಾಗೂ ಬಡ ಮಹಿಳೆಯಾದ ಭಾಗೀರಥಿ ಮುರುಳ್ಯಗೆ ಟಿಕೆಟ್ ಸಿಗ್ತಾ ಇರಲಿಲ್ಲ.ಕೋಟಾ ಪೂಜಾರಿ, ಸುನೀಲ್ ಕುಮಾರ್, ನಳಿನ್, ಪ್ರತಾಪ್ ಸಿಂಹ ನಾಯಕರಾಗಿ ಮುಂದೆ ಬರುತ್ತಿರಲಿಲ್ಲ ಎಂದು ಖಡಕ್ ಆಗಿ ಮಾತನಾಡಿದ್ದಾರೆ.

ನೂರಾರು ಬಡ ಕಾರ್ಯಕರ್ತರು ನಮ್ಮಲ್ಲಿ ಎಂ.ಪಿ, ಎಂ.ಎಲ್.ಎ ಆಗಿರೋದನ್ನು ನೋಡಿದ್ದೇವೆ. ಇಲ್ಲಿ ಗೋವಿಂದ ಬಾಬು ಪೂಜಾರಿಯನ್ನು ಮೋಸ‌ದ ಕೂಪಕ್ಕೆ ತಳ್ಳಲಾಗಿದೆ. ಬುದ್ದಿವಂತರ ಜಿಲ್ಲೆ ಎನಿಸಿಕೊಂಡ ದ.ಕ ಮತ್ತು ಉಡುಪಿಯಂಥವರೇ ಮೋಸ ಹೋಗಿದ್ದಾರೆ. ಹಾಗೆನಾದ್ರೂ ಕನ್ಫ್ಯೂಸ್ ಇದ್ರೆ ಅವರು‌ ನೇರವಾಗಿ ಫೋನ್ ಮಾಡಿದ್ರೂ ಬಿಜೆಪಿ ನಾಯಕರು ಫೋನ್ ಗೆ ಸ್ಪಂದಿಸುತ್ತಿದ್ದರು ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯೇ ಅವರ ಜೊತೆ ತುಳುವಲ್ಲೇ ಮಾತನಾಡ್ತಾ ಇದ್ರು. ನಳಿನ್ ಕಟೀಲ್, ಕೋಟಾ ಶ್ರೀನಿವಾಸ ಪೂಜಾರಿಯೂ ಮಾತನಾಡ್ತಾ ಇದ್ರು. ಅವರ ಬಳಿಯೇ ನೇರ ಫೋನ್ ಮಾಡಿ ಮಾತನಾಡುವ ಅವಕಾಶ ಗೋವಿಂದ ಬಾಬು ಪೂಜಾರಿಗೆ ಇತ್ತು. ಈ ಪ್ರಕರಣದ ಬಗ್ಗೆ ಸತ್ಯ ಬಹಿರಂಗ ಆಗಬೇಕು, ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಯಾರೇ ಇದ್ದರೂ ಸೂಕ್ತ ತನಿಖೆ ನಡೆದು ಕ್ರಮ ಆಗಲಿ.ಯಾರದ್ದೋ ಹೆಸರು ಕೇಳಿ ಬರ್ತಾ ಇದೆ ಅನ್ನೋದು ಬೇರೆ, ಸಮಗ್ರ ತನಿಖೆ ಆಗಲಿ. ಈ ಮೂಲಕ ಮೋಸ ಹೋದವರಿಗೂ ಇದೊಂದು ಪಾಠವಾಗಲಿ ಎಂದು ಆಗ್ರಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು