ಮಂಗಳೂರು: ಇಲ್ಲಿನ ಮಲ್ಲಿಕಟ್ಟೆಯ ಸುಮ ಸದನ ದಲ್ಲಿ ಜೆಡಿಎಸ್ ಪಕ್ಷದ ಮಂಗಳೂರು ದಕ್ಷಿಣ ಕ್ಷೇತ್ರ ವಿಧಾನಸಭಾ ಕ್ಷೇತ್ರದ ಚುನಾವಣೆ ಪೂರ್ವಭಾವಿ ಕಾರ್ಯಕ್ರಮದಲ್ಲಿ ಸುಮಾರು ಹಲವಾರು ಪದವಿನಂಗಡಿ ಭಾಗದ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಡಾ.ಸುಮತಿ ಎಸ್ ಹೆಗ್ಡೆ ಯವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ರೈತ ನಾಯಕಿ ಚೈತ್ರಗೌಡ ರವರ ಸಮ್ಮುಖದಲ್ಲಿ ಅಶಾ ಧರ್ಮರಾಜ್ ಅವರ ಸಾರಥ್ಯದಲ್ಲಿ ಹಲವಾರು ಯುವಕರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂಧರ್ಭ ಜೆಡಿಎಸ್ ಹಿರಿಯ ಮುಖಂಡರಾದ ಮೀರಾಸಾಹೇಬ್ ಕಡಬ, ಜೆಡಿಎಸ್ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷ ಇಝಾ ಬಜಾಲ್, ವಿನ್ಸೆಂಟ್ ಪೆರೇರಾ, ಮಹಿಳಾ ಜಿಲ್ಲಾಧ್ಯಕ್ಷೆ ರಮೀಝಾ ನಾಸಿರ್, ಭಾರತೀ ಪುಷ್ಪರಾಜನ್, ವೀಣಾ ಶೆಟ್ಟಿ, ಉಷಾ ಟೀಚರ್,ಲತೀಫ್ ಶಿವಭಾಗ್ , ಜಾವೇದ್ ಪಾಂಡೇಶ್ವರ,ಮುಹಮ್ಮದ್ ಶಫೀಕ್ ಆಲಡ್ಕ, ದಿನೇಶ್ ಪೈಸ್ ಪಡೀಲ್, ರಫೀಕ್ ಕಣ್ಣೂರು , ಪ್ರಿಯಾ ಸಾಲಿಯಾನ್,ಕವಿತಾ, ಚೂಡಾಮಣಿ ಹಾಗೂ ಹಲವಾರು ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ಜೆಡಿಎಸ್ ಮಂಗಳೂರು ದಕ್ಷಿಣ ವಿಧಾನಸಭಾ ಕಾರ್ಯದರ್ಶಿ ಅಲ್ತಾಫ್ ತುಂಬೆ ಸ್ವಾಗತಿಸಿದರು.