ಬೆಳ್ತಂಗಡಿ: ಪದ್ಮುಂಜ ಇಲ್ಲಿಯ ಕಣಿಯೂರು ಗ್ರಾಮದ ಬೊಳ್ಳರಮಜಲು ನಿವಾಸಿ ವಿದವೆ ಮಹಿಳೆ ಲಲಿತ ಎಂಬುವರು ತನ್ನ ಮನೆಯ ಬಾವಿಗೆ ಜಿಗಿದು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಜು.4 ರಂದು ರಾತ್ರಿ ವೇಳೆ ನಡೆದಿದ್ದು ಜು.5ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಜು.4 ರಂದು ರಾತ್ರಿ ಮಲಗಿದ್ದ ಮಹಿಳೆ ಬೆಳಿಗ್ಗೆ ಕಾಣದಾದಾಗ ಮನೆಯವರು ಹುಡಕಾಡಿದ್ದಾರೆ. ಕೊನೆಗೆ ಮನೆಯ ಬಾವಿಯಲ್ಲಿ ನೋಡೊದಾಗ ಶವ ಪತ್ತೆಯಾಗಿದೆ.
ಉಪ್ಪಿನಂಗಡಿ ಪೋಲೀಸರು ದೂರು ದಾಖಲು ಮಾಡಿಕೊಂಡು ವಿಚಾರಣೆ ನಡೆಸಿ ಕ್ರಮ ಕೈಗೊಂಡಿದ್ದಾರೆ. ಮೃತರು ಒಂದು ಗಂಡು, ಎರಡು ಹೆಣ್ಣು ಮಕ್ಕಳು, ಮೊಮ್ಮಕ್ಕಳು ಹಾಗೂ ಬಂಧು ಮಿತ್ರಾಧಿಗಳನ್ನು ಅಗಲಿದ್ದಾರೆ.