News Karnataka Kannada
Sunday, May 12 2024
ಮಂಗಳೂರು

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ನವೀಕೃತ ಸ್ನಾನಘಟ್ಟ ಉದ್ಘಾಟನೆ

Belthangady: The renovated bathing ghat of Sri Kshetra Dharmasthala was inaugurated
Photo Credit : By Author

ಬೆಳ್ತಂಗಡಿ, ಡಿ.17: ವಿಜಯ ನಗರ ಆಡಳಿತದ ಅವಧಿಯಲ್ಲಿ ತುಳುನಾಡು ಇತ್ತು. ವಿಜಯನಗರ ಸಾಮ್ರಾಜ್ಯ ಅತ್ಯಂತ ದೊಡ್ಡ ಸ್ಥಳ. ಅಲ್ಲಿಂದ ಧರ್ಮಸ್ಥಳ ಕ್ಷೇತ್ರಕ್ಕೆ ಬಂದು ಅಭಿವೃದ್ಧಿ ಕಾರ್ಯದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದು ಪ್ರವಾಸೋದ್ಯಮ ಇಲಾಖೆ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ ಸಿಂಗ್ ಹೇಳಿದರು.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಸಹಯೋಗದೊಂದಿಗೆ 4.80 ಕೋ.ರೂ. ವೆಚ್ಚದಲ್ಲಿ ಬೆಳ್ತಂಗಡಿ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳದ ಸ್ನಾನಘಟ್ಟ ಅಭಿವೃದ್ಧಿ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿದರು.

ಸರಕಾರದ ನೀತಿ ಉಲ್ಲಂಘಿಸಿದರು, ಧರ್ಮದ ಕ್ಷೇತ್ರವಾದ ಧರ್ಮಸ್ಥಳದ ನಿಯಮ ಉಲ್ಲಂಘಿಸುವುದು ಅಸಾಧ್ಯ. ನಂಬಿಕೆ ವಿಶ್ವಾಸವೇ ಧರ್ಮ. ಬಂದ ಭಕ್ತರಿಗೆ ಯಾವುದೇ ಅಡಚಣೆಯಾಗದಂತೆ ಧರ್ಮಸ್ಥಳ ಸ್ನಾನಘಟ್ಟ ಸುಂದರವಾಗಿ ಮೂಡಿಬರಲು ಡಾ.ಹೆಗ್ಗಡೆ ಅವರು ಅತ್ಯಂತ ಮುತುವರ್ಜಿ ವಹಿಸಿದ್ದಾರೆ. ಶಾಸಕ ಹರೀಶ್ ಪೂಂಜ ಅವರು ಯುವಕರಾಗಿ ಅಭಿವೃದ್ಧಿ ಕಾರ್ಯಕ್ಕೆ

ಪ್ರವಾಸೋದ್ಯಮ ಇಲಾಖೆಯಿಂದ ದ.ಕರ್ನಾಟಕದಲ್ಲಿ ಬೇರೆ ಬೇರೆ ಪಣಂಬೂರು, ಸೋಮೇಶ್ವರ, ಸಸಿಹಿತ್ಲು, ಸುರತ್ಕಲ್, ಉಳ್ಳಾಲ ಬೀಚ್ 23.6 ಕೋ.ರೂ. ಪ್ರಗತಿ. ಪಶ್ಚಿಮ ಘಟ್ಟ ಸಿಆರ್.ಝಡ್ ನಿಯಮಗಳನ್ನ ದೇಶದಲ್ಲಿ ಮೊದಲು ಒರಿಸಾದಲ್ಲಿ ಸಿಕ್ಕಿತ್ತು. ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಪ್ರವಾಸಿಗರಿಗೆ ಆಕರ್ಷಣೆ ಮಾಡಲು, ಕ್ರೂಸ್ ಟೂರಿಸಂ ಪರಿಚಯಿಸುವ ಪ್ರಸ್ತಾವನೆ ಸರಕಾರದಲ್ಲಿದೆ. ಜಿಲ್ಲೆಯಲ್ಲಿ 82 ಹೋಂ ಸ್ಟೇಗೆ ಅನುಮೋದನೆ ನೀಡಲಾಗಿದೆ. ಧಾರ್ಮಿಕ ಸ್ಥಳ ಪವಿತ್ರವಾಗಿರಿಸಲು ಹಂಪಿ ಭಾಗದಲ್ಲಿ ಪ್ರಾಧಿಕಾರ ರಚಿಸಿ ಸಂರಕ್ಷಿಸುವ ಕಾರ್ಯವಾಗಿದೆ. ಅದೇ ರೀತಿ ಧರ್ಮಸ್ಥಳದಲ್ಲಿ ಡಾ.ಹೆಗ್ಗಡೆ ಬೇಡಿಕೆಯನ್ನು ಸರಕಾರದ ಮುಂದಿರಿಸಿ ಖಾಸಗಿ ವಸತಿ ಕಟ್ಟಡ, ಮದ್ಯಪಾನ ಪರವಾನಿಗೆ ನೀಡದಂತೆ ಪ್ರಾಧಿಕಾರ ರಚಿಸಲು ಜಿಲ್ಲಾಧಿಕಾರಿಗಳು, ಶಾಸಕರಲ್ಲಿ ಚಿಂತನೆ ನಡೆಸುವಂತೆ ಸೂಚಿಸಿದರು. ಧರ್ಮಸ್ಥಳದ ಬೇಡಿಕೆಯನ್ನು ಪರಿಗಣಿಸುವಲ್ಲಿ ಸಚಿವನಾಗಿ ಸರಕಾರ ಮಟ್ಟದಲ್ಲಿ ಸಹಕರಿಸುವುದಾಗಿ ಭರವಸೆ ನೀಡಿದರು. ಸ್ನಾನಘಟ್ಟದ ಹೆಚ್ಚವರಿ ಕಾಮಗಾರಿಗೆ 5 ಕೋ.ರೂ. ಒದಗಿಸುವುದಾಗಿ ಭರವಸೆ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ತೀರ್ಥ ಮತ್ತು ಕ್ಷೇತ್ರ ಎರಡು ಮುಖ್ಯ. ನೇತ್ರಾವತಿ ಪವಿತ್ರ್ಯತೆಯನ್ನು ಉಳಿಸಬೇಕಾಗಿದೆ. ಅದಕ್ಕಾಗಿ ಸ್ವಚ್ಛತೆಗೆ ಆಧ್ಯತೆ ನೀಡಲಾಗಿದೆ. ಕ್ಷೇತ್ರದ ಪಾವಿತ್ರ್ಯ ರಕ್ಷಣೆ ದೃಷ್ಟಿಯಿಂದ ದೇವಳದ ಸನ್ನಿಧಿ ಸುತ್ತ ಒಂದುವರೆ ಕಿ.ಮೀ. ವ್ಯಾಪ್ತಿಯಲ್ಲಿ ಖಾಸಗಿ ಕಟ್ಟಡ, ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಬಾರದು ಎಂದು ಧರ್ಮಾಧಿಕಾರಿಗಳು ಸಚಿವರು ಹಾಗೂ ಜಿಲ್ಲಾಧಿಕಾರಿ ಬಳಿ ಬೇಡಿಕೆ ಮುಂದಿಟ್ಟರು.

ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿದ್ದರು. ಡಿ.ಹರ್ಷೇಂದ್ರ ಕುಮಾರ್, ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಸಿಂಹ ನಾಯಕ್, ದ.ಕ.ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷೆ ಜಯಾ ಮೋನಪ್ಪ ಗೌಡ, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕ ಜನಾರ್ದನ್, ಉಪ ನಿರ್ದೇಶಕ ಎನ್.ಮಾಣಿಕ್ಯ, ಕಾರ್ಯಪಾಲಕ ಎಂಜಿನಿಯರ್ ಯಶವಂತ್ ಕುಮಾರ್ ಎಸ್., ಉಪಸ್ಥಿತರಿದ್ದರು.

ಮಂಗಳೂರು ಹೆದ್ದಾರಿ ವಿಭಾಗ ಕಾರ್ಯಪಾಲಕ ಎಂಜಿನಿಯರ್ ಶಿವಪ್ರಸಾದ್ ಅಜಿಲ ಸ್ವಾಗತಿಸಿದರು. ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು