ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವಿಶೇಷ ಅನುದಾನವಾಗಿ ರೂ. ೧೫ ಲಕ್ಷ ಮೊತ್ತದ ಚೆಕ್ಕನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಸಮಿತಿ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಶ್ರೀ ಕ್ಷೇತ್ರದಿಂದ ಈ ಹಿಂದೆ ರೂ. ೧೫ ಲಕ್ಷ ಅನುದಾನ ಒದಗಿಸಲಾಗಿತ್ತು. ವೇಣೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಯಂ. ಪುರುಷೋತ್ತಮ ರಾವ್, ಸದಸ್ಯ ಸತೀಶ್, ಜೀರ್ಣೋದ್ಧಾರ ಸಮಿತಿಯ ಎ. ಜಯರಾಮ ಶೆಟ್ಟಿ, ಶೀನ ದೇವಾಡಿಗ, ನತೇಶ್ ಭಟ್ ಜತೆಗಿದ್ದರು.