ಬೆಳ್ತಂಗಡಿ: ಶಾಲಾ ಮುಖ್ಯೋಪಾಧ್ಯಾಯ ಮಹಾಂತೇಶ್(47) ಹೃದಯಘಾತದಿಂದ ನ.25 ರಂದು ರಾತ್ರಿ ನಿಧನ ಹೊಂದಿದರು. ಗುರುವಾರ ಉಸಿರಾಟದ ತೊಂದರೆ ಕಾಣಿಸಿದ ಕಾರಣ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ರಾತ್ರಿ ಹೃದಯಘಾತದಿಂದ ನಿಧನ ಹೊಂದಿದರು.
ಮಕ್ಕಳ ಜೋತೆಗೆ ಉತ್ತಮ ಬಾಂಧವ್ಯದಲ್ಲಿ ಇದ್ದು ಜನರ ಪ್ರೀತಿ ಪಾತ್ರರಾಗಿದ್ದರು. ದೇವಗಿರಿ ಶಾಲೆಗೆ ಕರ್ತವ್ಯವನ್ನು ಆರಂಭಿಸಿದ್ದ ಇವರು ನಂತರ ಅಣಿಯೂರು ಕಕ್ಕಿಂಜೆ ಶಾಲೆ ಯಲ್ಲಿ ಸಹಶಿಕ್ಷಕರಾಗಿ ಮತ್ತು 2022 ಮೇ ನಲ್ಲಿ ಮುಖ್ಯಶಿಕ್ಷಕರಾಗಿ ತೋಟತ್ತಾಡಿ ಶಾಲೆ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.