News Karnataka Kannada
Monday, May 06 2024
ಮಂಗಳೂರು

ಬೆಳ್ತಂಗಡಿ: ಮನೆಯೊಳಗೆ ನುಗ್ಗಿ ರೂ. 75 ಸಾವಿರ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳ

Thieves loot gold, cash at Korangrapady
Photo Credit : News Kannada

ಬೆಳ್ತಂಗಡಿ: ಮಹಿಳೆಯೊವ೯ರು ಮನೆಯಲ್ಲಿ ಒಬ್ಬರೇ ಇರುವ‌ ಸಂದರ್ಭದಲ್ಲಿ ಮನೆಯೊಳಗೆ ನುಗ್ಗಿದ ಕಳ್ಳನೋವ೯ ಮಹಿಳೆಗೆ ಚಾಕು ತೋರಿಸಿ ಬೆದರಿಕೆ ಹಾಕಿ ರೂ. 75 ಸಾವಿರ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಎ.22 ರಂದು ಉಜಿರೆಯಲ್ಲಿ ನಡೆದಿದೆ.

ಉಜಿರೆ ಗ್ರಾಮದ ಹಳೆಪೇಟೆ ಜೈನ್ ಕಾಂಪೌಂಡ್ ನಿವಾಸಿ ಪಾಂಡಿರಾಜ ಎಂಬವರ ಪತ್ನಿ ಶ್ರೀಮತಿ ಶ್ರೀಯಾಳ ದೇವಿ((71ವ)ಯವರ ಮನೆಯಲ್ಲಿ ಈ ಘಟನೆ ನಡೆದಿದೆ.

ಎಂ.21ರಂದು ಶ್ರೀಯಾಳ ದೇವಿ ಅವರು ಉಜಿರೆ ಗ್ರಾಮದ ಜೈನ್ ಕಂಪೌಂಡ್ ಹಳೆ ಪೇಟೆ ಮನೆಯಲ್ಲಿ ಒಬ್ಬರೇ ಇರುವ ಸಮಯ ಸುಮಾರು 2.30ಕ್ಕೆ ಅಪರಿಚಿತ ವ್ಯಕ್ತಿಯೋರ್ವ ಮನೆಯೊ ಳಗೆ ನುಗ್ಗಿ ಕೈಯಲ್ಲಿದ್ದ ಚೂರಿಯನ್ನು ತೋರಿಸಿ ಚಿನ್ನಾಭರಣ ನೀಡುವಂತೆ ಬೆದರಿಸಿದನ್ನೆನ್ನಲಾಗಿದೆ.

ನಂತರ ಶ್ರೀಯಾಳ ದೇವಿಯವರ ಕುತ್ತಿಗೆಯ ಲ್ಲಿದ್ದ 3 ಪವನ್ ತೂಕದ ಚಿನ್ನದ ಕರಿಮಣಿ ಸರ ಹಾಗೂ 1 ಗ್ರಾಂ, ತೂಕದ ಮ್ಯಾಟಿಯನ್ನು ತುಂಡು ಮಾಡಿ ಎಳೆದುಕೊಂಡು ಪರಾರಿ ಯೋಜನೆಂದು ಶ್ರೀಯಾಳ ದೇವಿಯವರು ಬೆಳ್ತಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ದರೋಡೆ ಮಾಡಿದ ಚಿನ್ನಾಭರಣದ ಒಟ್ಟು ಮೌಲ್ಯ 75,000/- ಆಗಬಹುದು ಅಂದಾಜಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆ ಅ.ಕ್ರ: 32/2023 ಕಲಂ: 392 ಐ.ಪಿ,ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು