ಬೆಳ್ತಂಗಡಿ: ಮಹಿಳೆಯೊವ೯ರು ಮನೆಯಲ್ಲಿ ಒಬ್ಬರೇ ಇರುವ ಸಂದರ್ಭದಲ್ಲಿ ಮನೆಯೊಳಗೆ ನುಗ್ಗಿದ ಕಳ್ಳನೋವ೯ ಮಹಿಳೆಗೆ ಚಾಕು ತೋರಿಸಿ ಬೆದರಿಕೆ ಹಾಕಿ ರೂ. 75 ಸಾವಿರ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಎ.22 ರಂದು ಉಜಿರೆಯಲ್ಲಿ ನಡೆದಿದೆ.
ಉಜಿರೆ ಗ್ರಾಮದ ಹಳೆಪೇಟೆ ಜೈನ್ ಕಾಂಪೌಂಡ್ ನಿವಾಸಿ ಪಾಂಡಿರಾಜ ಎಂಬವರ ಪತ್ನಿ ಶ್ರೀಮತಿ ಶ್ರೀಯಾಳ ದೇವಿ((71ವ)ಯವರ ಮನೆಯಲ್ಲಿ ಈ ಘಟನೆ ನಡೆದಿದೆ.
ಎಂ.21ರಂದು ಶ್ರೀಯಾಳ ದೇವಿ ಅವರು ಉಜಿರೆ ಗ್ರಾಮದ ಜೈನ್ ಕಂಪೌಂಡ್ ಹಳೆ ಪೇಟೆ ಮನೆಯಲ್ಲಿ ಒಬ್ಬರೇ ಇರುವ ಸಮಯ ಸುಮಾರು 2.30ಕ್ಕೆ ಅಪರಿಚಿತ ವ್ಯಕ್ತಿಯೋರ್ವ ಮನೆಯೊ ಳಗೆ ನುಗ್ಗಿ ಕೈಯಲ್ಲಿದ್ದ ಚೂರಿಯನ್ನು ತೋರಿಸಿ ಚಿನ್ನಾಭರಣ ನೀಡುವಂತೆ ಬೆದರಿಸಿದನ್ನೆನ್ನಲಾಗಿದೆ.
ನಂತರ ಶ್ರೀಯಾಳ ದೇವಿಯವರ ಕುತ್ತಿಗೆಯ ಲ್ಲಿದ್ದ 3 ಪವನ್ ತೂಕದ ಚಿನ್ನದ ಕರಿಮಣಿ ಸರ ಹಾಗೂ 1 ಗ್ರಾಂ, ತೂಕದ ಮ್ಯಾಟಿಯನ್ನು ತುಂಡು ಮಾಡಿ ಎಳೆದುಕೊಂಡು ಪರಾರಿ ಯೋಜನೆಂದು ಶ್ರೀಯಾಳ ದೇವಿಯವರು ಬೆಳ್ತಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ದರೋಡೆ ಮಾಡಿದ ಚಿನ್ನಾಭರಣದ ಒಟ್ಟು ಮೌಲ್ಯ 75,000/- ಆಗಬಹುದು ಅಂದಾಜಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆ ಅ.ಕ್ರ: 32/2023 ಕಲಂ: 392 ಐ.ಪಿ,ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.