ಔರಾದ: ತಾಲೂಕಿನ ವಡಗಾಂವ ದೇ ಗ್ರಾಮದಲ್ಲಿ ರಾಷ್ಟ್ರೀಯ ಬಸವದಳ ವತಿಯಿಂದ ಸಡಗರ ಸಂಭ್ರಮದಿಂದ ಬಸವ ಜಯಂತಿ ಆಚರಣೆ ಮಾಡಲಾಯಿತು.
ಬಸವೇಶ್ವರ ಫೋಟೊ, ಪ್ರತಿಮೆ ಹಾಗೂ ಪುತ್ಥಳಿಗಳಿಗೆ ಪೂಜಾ ಕಾರ್ಯಕ್ರಮ ನಡೆಯಿತು. ಬೆಳಗ್ಗೆ 9 ಗಂಟೆಗೆ ಗ್ರಾಮದ ಮಹಿಳೆಯರಿಂದ ಬಸವಣ್ಣನವರ ತೊಟ್ಟಿಲು ಕಾರ್ಯಕ್ರಮ ಜರುಗಿತು.
ವಡಗಾಂವ ದಿಂದ ಸಂತಪುರನ ಅನುಭವ ಮಂಟಪದ ವರೆಗೆ ನೂರಾರು ಸಂಖ್ಯೆಯಲ್ಲಿ ಬೈಕ್ ರ್ಯಾಲಿ ನಡೆಯಿತು. ಅಲ್ಲಿ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಜೈ ಘೋಷಣೆ ಮೊಳಗಿಸಿದರು. ಈ ಸಂದರ್ಭದಲ್ಲಿ ಪ್ರಕಾಶ್ ಜೀರ್ಗೆ, ಬಸವರಾಜ್ ಚಿಕಲಿಂಗೆ, ರಾಜಕುಮಾರ್ ಲೆಂಡಧರೆ, ಮಹದೇವ್ ಕಲ್ಲಾ, ರವಿಕುಮಾರ್ ಸ್ವಾಮಿ, ಸೋಮನಾಥ್ ಮಠಪತಿ, ಭಾರತ ಸ್ವಾಮಿ, ಸಚಿನ್ ಸ್ವಾಮಿ, ಶ್ರೀಕಾಂತ್, ಬಸಪ್ಪಾ ಗಡ್ರಾ, ನಾಗೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.