ಬೆಳ್ತಂಗಡಿ: ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಧಾರೆಯೆರದ ನಿವೃತ್ತ ಶಿಕ್ಷಕಿ, ಕೊಡುಗೈ ದಾನಿ ಉರುವಾಲು ಗ್ರಾಮದ ಕಜೆ ನಿವಾಸಿ ಶಾರದಾ (82) ಗುರುವಾರ ಬೆಳಗ್ಗೆ ನಿಧನ ಹೊಂದಿದರು.
ಇವರು ಕಣಿಯೂರು ಗ್ರಾಮ ಪಂಚಾಯತ್ ಮಾಜಿ ಅದ್ಯಕ್ಷ ಗಣೇಶ ಪ್ರಸಾದ್ ಕೆರ್ಮುಣ್ಣಾಯ ರವರ ತಾಯಿ. ಅವರು ಮಕ್ಕಳಾದ ಡಾ. ಶ್ರೀಶ ಕುಮಾರ್, ರಾಘವೇಂದ್ರ ಪ್ರಸಾದ್, ದೇವಿಪ್ರಸಾದ್, ಗಣೇಶ್ ಪ್ರಸಾದ್ ಕೆರ್ಮುಣ್ಣಾಯ, ರಾಜೇಶ್ವರಿ, ವೀಣಾ ಮತ್ತು ರಾಜಲಕ್ಷ್ಮೀ, ಹಾಗೂ ಶಿಷ್ಯ ವರ್ಗ ಮತ್ತು ಬಂಧು ವರ್ಗದವರನ್ನು ಅಗಲಿದ್ದಾರೆ.