ಬೆಳ್ತಂಗಡಿ: ಅಡಕೆ ಬೆಳೆಗಾರರ ಹಿತ ದೃಷ್ಟಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಂಗಳೂರು ಕೃಷಿಕರ ಸಹಕಾರಿ ಸಂಘ(ಮಾಸ್ ಲಿಮಿಟೆಡ್) ಇದರ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ತಾಲೂಕಿನ ಮೂವರು ಆಯ್ಕೆಯಾಗಿದ್ದಾರೆ.
ಮುಂದಿನ 5ವರ್ಷ ಅವಧಿಗೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಹಿರಿಯ ಸಹಕಾರಿ ಮುಂಡಾಜೆಯ ಶ್ರೀಧರ ಜಿ.ಭಿಡೆ,ಹಿಂದುಳಿದ ವರ್ಗಗಳ ಕ್ಷೇತ್ರದಿಂದ ಉಜಿರೆಯ ಇಚ್ಚಿಲ ಸುಂದರ ಗೌಡ,ಸಂಘ ಸಂಸ್ಥೆ ಕ್ಷೇತ್ರದಿಂದ ಪೆರಾಡಿಯ ಸತೀಶ್ ಕಾಶಿಪಟ್ಣ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಗಳೂರು ಸಹಕಾರಿ ಸಂಘಗಳ ಎ.ಆರ್.ಸುಧೀರ್ ಕುಮಾರ್ ಚುನಾವಣಾಧಿಕಾರಿಯಾಗಿದ್ದರು.