ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬಾಹುಬಲಿ ಬೆಟ್ಟದ ಸಮೀಪ ಕುಡಿಯು ನೀರಿನ ಕಾಮಗಾರಿಗಾಗಿ ಆಂಧ್ರಪ್ರದೇಶದಿಂದ ಪೈಪ್ ಗಳನ್ನು ತಂದಿದ್ದ ಲಾರಿಯಿಂದ ಪೈಪ್ ಗಳನ್ನು ಇಳಿಸುವ ವೇಳೆ ಆಕಸ್ಮಿಕವಾಗಿ ಪೈಪ್ ತಾಗಿ ಲಾರಿ ಚಾಲಕ ಮೃತಪಟ್ಟ ಘಟನೆ ಭಾನುವಾರ ಬೆಳಿಗ್ಗೆ ಸಂಭವಿಸಿದೆ.
ಮೃತ ವ್ಯಕ್ತಿ ಆಂಧ್ರ ಮೂಲದ ಲಾರಿ ಚಾಲಕನಾಗಿರುವ ಮಧುಸೂದನ್ ರೆಡ್ಡಿ (40)ಎಂಬವರಾಗಿದ್ದಾರೆ.
ಸರಕಾರದಿಂದ ಮಂಜೂರಾಗಿರುವ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ನಡೆಯುತ್ತಿದ್ದು ಇಲ್ಲಿಗೆ ಆಂದ್ರಪ್ರದೇಶದಿಂದ. ಪೈಪ್ ಗಳನ್ನು ತರಲಾಗಿತ್ತು. ಧರ್ಮಸ್ಥಳ ದಲ್ಲಿ ಪೈಪಿಗೆ ಕಟ್ಟಿದ್ದ ಚೈನ್ ಬಿಚ್ಚುತ್ತಿದ್ದ ವೇಳೆ ಏಕಾಏಕಿ ಪೈಪ್ ಗಳು ಜಾರಿದ್ದು ಅದು ಚಾಲಕ ಮಧುಸೂದನ್ ಅವರ ತಲೆಗೆ ತಾಗಿದೆ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.