News Karnataka Kannada
Wednesday, May 08 2024
ಮಂಗಳೂರು

ಬೆಳ್ತಂಗಡಿ: “ಕಗ್ಗದಲ್ಲಿ ಜೀವನ ದರ್ಶನ- ಒಂದು ಅವಲೋಕನ” ಕಾರ್ಯಕ್ರಮ

Kagga
Photo Credit : By Author

ಬೆಳ್ತಂಗಡಿ: ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ) ಕರ್ನಾಟಕ , ಬೆಳ್ತಂಗಡಿ ಸಮಿತಿ ಮತ್ತು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು (ರಿ) ಬೆಳ್ತಂಗಡಿ ಘಟಕ ದ ಜಂಟಿ ಆಶ್ರಯದಲ್ಲಿ ನಡ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆ. 24 ರಂದು ಏರ್ಪಡಿಸಲಾದ “ಕಗ್ಗದಲ್ಲಿ ಜೀವನ ದರ್ಶನ- ಒಂದು ಅವಲೋಕನ” ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ| ಪ್ರದೀಪ್ ನಾವೂರು ಅವರು ಮಂಕುತಿಮ್ಮನ ಕಗ್ಗದ ಮಹತ್ವ ,ಅದರ ಹಿಂದಿರುವ ಜೀವನಾನುಭವವನ್ನು ಎಳೆ ಎಳೆಯಾಗಿ ಬಿಡಿಸಿಟ್ಟು ಅಭ್ಯಾಸವನ್ನು ಅಭ್ಯಾಸಯೋಗವನ್ನಾಗಿ ಪರಿವರ್ತನೆ ಮಾಡಿ. ಬೇಡದ ವಿಷಯಗಳ ದಾಸ್ಯದಿಂದ ಹೊರ ಬಂದು ಬದುಕಿನ ಗುರಿಯನ್ನು ಮುಟ್ಟುವ ಛಲವನ್ನು ಬಿಡಬಾರದು ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಳ್ತಂಗಡಿ ಸಮಿತಿಯ ಅಧ್ಯಕ್ಷ ಪ್ರೊ. ಗಣಪತಿ ಭಟ್ ಕುಳಮರ್ವ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಬೆಳ್ತಂಗಡಿ ಘಟಕದ ಅಧ್ಯಕ್ಷ.., ಅ.ಭಾ.ಸಾ.ಪ. ಬೆಳ್ತಂಗಡಿ ಸಮಿತಿಯ ಕಾರ್ಯದರ್ಶಿ ಸುಭಾಷಿಣಿ, ಪೂರ್ವಾಧ್ಯಕ್ಷ ಡಾ| ಶ್ರೀಧರ್ ಭಟ್, ಉಪಾಧ್ಯಕ್ಷ ವಿಶ್ವೇಶ್ವರ ಭಟ್, ಮಹಿಳಾ ಪ್ರಕಾರ ಪ್ರಮುಖ್ ಶ್ರೀಮತಿ ವಿದ್ಯಾಶ್ರೀ ಅಡೂರು, ಕ.ಚು.ಸಾ.ಪ. ಕಾರ್ಯದರ್ಶಿ ಶ್ರೀಮತಿ ಹೇಮಾವತಿ, ಕಾಲೇಜು ಸಿಬ್ಬಂದಿ ಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶ್ರೀಮತಿ ವಸಂತಿ ಪ್ರಸ್ತಾವಿಸಿದರು . ಅಧ್ಯಕ್ಷ ಪ್ರೊ. ಗಣಪತಿ ಭಟ್ ಸ್ವಾಗತಿಸಿ, ಕಾರ್ಯದರ್ಶಿ ಸುಭಾಷಿಣಿ ಕಾರ್ಯಕ್ರಮವನ್ನು ನಿರೂಪಿಸಿ, ವಿದ್ಯಾಶ್ರೀ ಅಡೂರು ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು