ಬೆಳ್ತಂಗಡಿ: ಮೇ.10 ರಂದು ಸಂಜೆ ವೇಳೆ ಸುರಿದ ಧಾರಾಕಾರ ಮಳೆಯಿಂದಾಗಿ ಧರ್ಮಸ್ಥಳ ಗ್ರಾಮದ ನಾರ್ಯ ಆರಿಕೋಡಿಯ ವಿಮಲಾಕ್ಷ ಗೌಡ ಎಂಬವರ ಮನೆಗೆ ಹಾನಿಯಾದ ಬಗ್ಗೆ ವರದಿಯಾಗಿದೆ.
ಮನೆಯ ಮೇಲ್ಚಾವಣಿಯ ಹಿಂದಿನ ಭಾಗದ ಸಿಮೆಂಟ್ ಶೀಟ್ ಸಂಪೂರ್ಣವಾಗಿ ಹಾರಿ ಬಿದ್ದು ಪುಡಿಪುಡಿಯಾಗಿದೆ. ಮಾಹಿತಿ ಅರಿತು ಸ್ಥಳಕ್ಕೆ ಗ್ರಾ.ಪಂ ಸದಸ್ಯ ಸುಧಾಕರ್ ಗೌಡ ತಕ್ಷಣ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಶಾಸಕ ಹರೀಶ್ ಪೂಂಜ ಅವರ ಗಮನಕ್ಕೆ ತಂದು, ತುರ್ತು ಬೇಕಾದ ತಾತ್ಕಾಲಿಕ ಪರಿಹಾರವನ್ನು ಒದಗಿಸಿದ್ದಾರೆ.