ಬೆಳ್ತಂಗಡಿ: ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಜೀವನದಲ್ಲಿ ಗುರಿ ಬೇಕು.ಗುರಿ ತಲುಪಲು ಸತತ ಪ್ರಯತ್ನ,ತಾಳ್ಮೆ,ಬದ್ಧತೆ ಬೇಕು. ಯಶಸ್ಸು ಆತ್ಮವಿಶ್ವಾಸವನ್ನು ಅವಲಂಬಿಸಿರುತ್ತದೆ. ಬಡತನ ಶಾಪವಲ್ಲ,ಅದನ್ನು ಸವಾಲಾಗಿ ಸ್ವೀಕರಿಸಬೇಕು .ತರಗತಿಯ ಹೊರಗಿನ ಶಿಕ್ಷಣ ಬದುಕಿಗೆ ಪೂರಕವಾಗಿರುತ್ತದೆ ಎಂದು ಉಜಿರೆ ಎಸ್ ಡಿ.ಎಂ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸೋಮಶೇಖರ ಶೆಟ್ಟಿ ನುಡಿದರು.
ಅವರು ಜೂ 30 ರಂದು ಉಜಿರೆಯ ಎಸ್ .ಡಿ.ಎಂ ಪಾಲಿಟೆಕ್ನಿಕ್ ನ “ಸರ್ಕ್ಯೂಟ್ ಎಕ್ಸ್ಪೋ -2022” ಸಮಾರಂಭದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಶಿಕ್ಷಣ ಮತ್ತು ಜೀವನ ಮೌಲ್ಯ ಜತೆಯಾಗಿರಬೇಕು. ಬದುಕಿನಲ್ಲಿ ಜೀವನ ಕೌಶಲ ಮತ್ತು ಮೌಲ್ಯಗಳನ್ನು ಸೇರಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಮಯದ ಸದುಪಯೋಗ ಪಡೆದುಕೊಂಡು ಹೊಸ ಹೊಸ ಆವಿಷ್ಕಾರ ,ಯೋಚನೆ,ಯೋಜನೆಗಳು ನಿರಂತರ ನಡೆದು ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ಅವರು ನುಡಿದರು .
ಸಮಾರಂಭವನ್ನು ಬೆಳ್ತಂಗಡಿ ಯ ಎಸ್ .ಡಿ.ಎಂ ,ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಹೇಮಲತಾ ಎಂ. ಆರ್ ಉದ್ಘಾಟಿಸಿ ಮಕ್ಕಳು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ನುಡಿದು ಶುಭ ಹಾರೈಸಿದರು .
ಕಾಲೇಜು ಪ್ರಾಚಾರ್ಯ ಸಂತೋಷ್ ಪ್ರಸ್ತಾವಿಸಿದರು . ಕಾರ್ಯಕ್ರಮ ಸಂಯೋಜಿಸಿದ ಕಾಲೇಜಿನ ಇ ಅಂಡ್ ಸಿ ವಿಭಾಗ ಮುಖ್ಯಸ್ಥೆ ಮೇರಿ ಸ್ಮಿತಾ,ಕಚೇರಿ ಮುಖ್ಯಸ್ಥ ಚಂದ್ರನಾಥ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಪ್ರಣವ್ ಸ್ವಾಗತಿಸಿ,ಗೌತಮ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಅಭಿಷೇಕ್ ಭಟ್ ವಂದಿಸಿದರು. ವಿದ್ಯಾರ್ಥಿಗಳು ಆವಿಷ್ಕರಿಸಿ ಸಿದ್ಧಪಡಿಸಿದ ಪ್ರೊಜೆಕ್ಟ್ ಮಾದರಿಗಳನ್ನು ಪ್ರದರ್ಶಿಸಿ,ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಇಡೀ ದಿನ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಕ್ವಿಜ್,ಪಿಕ್ ಅಂಡ್ ಸ್ಪೀಕ್,ಸಾಂಸ್ಕೃತಿಕ ಮನರಂಜನೆ,ಮಿ! ಬೀನ್ ಸ್ಪರ್ಧಾ ಕಾರ್ಯಕ್ರಮಗಳು ನಡೆದು ಸಂಜೆ ಬಹುಮಾನ ವಿತರಣೆ ಹಾಗು ಸಮಾರೋಪ ಸಮಾರಂಭ ನಡೆಯಿತು.