ಬೆಳ್ತಂಗಡಿ: ತಾಲೂಕಿನ ಕೆಲವು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆ ಆದೇಶವನ್ನು ದ.ಕ.ಜಿ.ಪಂ. ಹೊರಡಿಸಿದೆ.ಉಳ್ಳಾಲ ಬಾಳೆಪುಣಿ ಗ್ರಾಮ ಪಂಚಾಯಿತಿ ಪಿಡಿಒ ಚೆನ್ನಪ್ಪ ನಾಯ್ಕ ಅವರನ್ನು ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮ ಪಂಚಾಯತಿಗೆ, ವೇಣೂರು ಪಿಡಿಒ ಸುಧಾಕರ್ ಅವರನ್ನು ನಾರಾವಿ ಗ್ರಾಪಂ.ಗೆ ಬಂಟ್ವಾಳ ಚೆನ್ನೈತ್ತೋಡಿಯ ಪಿಡಿಒ ರಾಜಶೇಖರ್ ರೈ ಬೆಳ್ತಂಗಡಿಯ ಮಾಲಾಡಿ ಗ್ರಾಮ ಪಂಚಾಯತಿಗೆ, ಪುತ್ತೂರು ಆರ್ಯಾಪು ಗ್ರಾಮ ಪಂಚಾಯತಿಯ ನಾಗೇಶ್ ವೇಣೂರು ಪಂಚಾಯಿತಿಗೆ, ಅಳದಂಗಡಿ ಗ್ರಾಮ ಪಂಚಾಯಿತಿ ಪಿಡಿಒ ಗಾಯತ್ರಿ ಮುಂಡಾಜೆಗೆ, ಮುಂಡಾಜೆಯ ಪಿಡಿಒ ಸುಮಾ ನೆರಿಯ ಗ್ರಾಮಕ್ಕೆ ವರ್ಗಾವಣೆಗೊಳಿಸಿರುವ ಕುರಿತು ಆದೇಶದಲ್ಲಿ ತಿಳಿಸಲಾಗಿದೆ.
ಬೆಳ್ತಂಗಡಿ: ಪಿಡಿಒಗಳ ವರ್ಗಾವಣೆಗೆ ಆದೇಶ ಹೊರಡಿಸಿದ ದ.ಕ.ಜಿ.ಪ
Photo Credit :
By Author
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.