News Karnataka Kannada
Tuesday, May 07 2024
ಮಂಗಳೂರು

ಬೆಳ್ತಂಗಡಿ: ದಲಿತ ಯುವಕನ ಕೊಲೆ ಪ್ರಕರಣ, ಆರೋಪಿಗಳನ್ನು ಬಂಧಿಸದಿದ್ದರೆ ಜಿಲ್ಲಾದ್ಯಂತ ಪ್ರತಿಭಟನೆ

Belthangady: Dalit youth's murder case: Protests across the district if the accused are not arrested
Photo Credit : By Author

ಬೆಳ್ತಂಗಡಿ: ಶಿಬಾಜೆ ಕುರುಂಜ ಎಂಬಲ್ಲಿ ತೋಟದ ಕಾರ್ಮಿಕನಾಗಿ ದುಡಿಯುತ್ತಿದ್ದ ಅಮಾಯಕ ದಲಿತ ಯುವಕ ಶ್ರೀಧರ ನನ್ನು ಮರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದು, ಆರೋಪಿಗಳ ವಿರುದ್ಧ ಕೊಲೆ, ದರೋಡೆ, ಹಲ್ಲೆ, ದಲಿತ ದೌರ್ಜನ್ಯ ಪ್ರಕರಣ ದಾಖಲಾದರು ಆರೋಪಿಗಳನ್ನು ಬಂಧಿಸದೇ ರಾಜಕೀಯವಾಗಿ ರಕ್ಷಣೆ ನೀಡಲಾಗುತ್ತಿದೆ.

ತಕ್ಷಣ ಬಂದಿಸದಿದ್ದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ಅಂಬೇಡ್ಕರ್ ವಾದ ಬೆಳ್ತಂಗಡಿ ಸಮಿತಿ, ಮೊಗೇರ ಸಂಘ ಸಮನ್ವಯ ಸಮಿತಿ ಬೆಳ್ತಂಗಡಿ, ನಲಿಕೆಯವರ ಸಮಾಜ ಸೇವಾ ಸಂಘ ರಿ ಬೆಳ್ತಂಗಡಿ ಇದರ ವತಿಯಿಂದ ಜಿಲ್ಲೆಯಾದ್ಯಂತ ಬ್ರುಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪ್ರಧಾನ ಸಂಚಾಲಕ ನೇಮಿರಾಜ್ ಕೆ ಹೇಳಿದರು.

ಅವರು ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಶ್ರಿದರ ಮೂಲತಃ ಚಿಕ್ಕಮಗಳೂರು ಜಿಲ್ಲೆಯವನಾಗಿದ್ದು ಶಿಬಾಜೆಯ ಫಾರ್ ಹೌಸ್ ನಲ್ಲಿ ದುಡಿಯುತ್ತಿದ್ದನು.ಇದರಲ್ಲಿ ಹಿಂದೆ ದುಡಿಯುತ್ತಿದ್ದ ಅರೋಪಿಗಳಾದ ತಿಮ್ಮಪ್ಪ ಪೂಜಾರಿ, ಲಕ್ಷಣ ಪುಜಾರಿ,ಅನಂದ ಗೌಡ, ಸೇರಿ ಶ್ರಿದರನ ಮದುವೆ ವಿಚಾರ ಮುಂದಿಟ್ಟು ಹಿಗ್ಗಾ ಮುಗ್ಗಾ ಥಳಿಸಿದ್ದು ಈತನ ಕಿರುಚಾಟ ಕೇಳಿ ತೋಟದ ಸುಪರ್ ವೈಸರ್ ಹರೀಶ್, ಟಿ ಸಿ ಅಬ್ರಾಹಂ,ಪರಮೇಶ್ವರ ಗೌಡ ರಕ್ಷಸಿ ಅತ ಉಳಿದುಕೊಳ್ಳುವ ಮನೆಗೆ ಕಳಿಸಿದ್ದಾರೆ.ಅದೇ ದಿನ ರಾತ್ರಿ ಹಲ್ಲೆಯ ವಿಷಯ ಬಹಿರಂಗವಾಗಿದ್ದು ಇದರಿಂದ ಪ್ರಕರಣ ದಾಖಲಾಗಬಹುದು ಎಂಬ ಉದ್ದೇಶದಿಂದ ಮತ್ತೆ ಬೆದರಿಸಿ ಹಲ್ಲೆ ನಡೆಸಿ ಮದ್ಯ ಮತ್ರು ಕೀಟನಾಶವನ್ನು ಬಾಯಿಗೆ ಹಾಕಿ ಕೊಲೆ ಮಾಡಿ ಕೊಲೆಯನ್ನು ದಾರಿ ತಪ್ಪುವ ಉದ್ದೇಶದಿಂದ ಬೆತ್ತಲೆ ಮಾಡಿ ಸ್ವಲ್ಪ ದೂರ ಹಾಕಿ ಹೋಗಿದ್ದಾರೆ. ಮತ್ತು 9500.00 ನಗದನ್ನು ದೋಚಿದ್ದಾರೆ. ಎಂದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಚಂದು ಎಲ್ ಮಾತನಾಡಿ ಸಿವಿಲ್ ಪ್ರಕರಣದಲ್ಲಿ ಮದ್ಯರಾತ್ರಿ ಹೋಗಿ ಪೋಲೀಸರು ಬಂದಿಸಿದ ಉದಾಹರಣೆ ಇದೆ.ಅದರೆ ಇದರಲ್ಲಿ ಇಷ್ಟು ದೊಡ್ಡ ಪ್ರಕರಣ ದಾಖಲಾದರು ಬಂದನವಾಗಿಲ್ಲ.ರಾಜಕೀಯವಾಗಿ ರಕ್ಷಣೆ ನೀಡಲಾಗುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಶಾಸಕ ಹರೀಶ್ ಪೂಂಜರವರು ಮದ್ಯಪ್ರವೇಶಿಸಿ ದಲಿತ ಯುವಕನಿಗೆ ನ್ಯಾಯ ಕೊಡಿಸಬೇಕು.ಸರಕಾರ ಇದನ್ನು ವಿಶೇಷ ನೆಲೆಯಲ್ಲಿ ಪ್ರಕರಣದ ತನಿಖಾದಿಕಾರಿಯನ್ನು ಬದಲಾಯಿಸಿ ಉನ್ನತ ಮಟ್ಟದಲ್ಲಿ ಸಿ ಒ ಡಿ ತನಿಖೆ ನಡೆಸಬೇಕು. ಮತ್ತು ದೂರುದಾರರಿಗೆ,ಸಾಕ್ಷದಾರರಿಗೆ ರಕ್ಷಣೆ ಕೊಡಬೇಕು .ತಕ್ಷಣ ಅರೋಪಿಗಳ ಬಂದನ ಆಗದಿದ್ದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದರು.

ಗೋಷ್ಠಿಯಲ್ಲಿ ಮೊಗೇರ ಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಜಯಪ್ರಕಾಶ್ ಕನ್ಯಾಡಿ,ತಾಲೂಕು ಕಾರ್ಯದರ್ಶಿ ಜಗದೀಶ್ ಕಕ್ಕಿಂಜೆ, ದಲಿತ ಸಂಘರ್ಷ ಸಮನ್ವಯ ಸಮಿತಿಯ ಜಿಲ್ಲಾ ಪ್ರದಾನ ಕಾರ್ಯದರ್ಶಿ ಅಶೋಕ ಕೊಂಚಾಡಿ, ಜಿಲ್ಲಾ ಸಮಿತಿ ಸದಸ್ಯ ವೆಂಕಣ್ಣ ಕೊಯ್ಯೂರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು