News Karnataka Kannada
Thursday, May 09 2024
ಮಂಗಳೂರು

ಬೆಳ್ತಂಗಡಿ: ಅಕ್ರಮ‌ ಗಣಿಗಾರಿಕೆ ವಿರುದ್ಧ ಇಲಾಖೆಗೆ ದೂರು

Belthangady: Complaint lodged with the department against illegal mining
Photo Credit : By Author

ಬೆಳ್ತಂಗಡಿ: ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಕನ್ಯಾಡಿ 1 ಗ್ರಾಮದ ಪ್ರಭಾಕರ ನಾಯ್ಕ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಿದ್ದಾರೆ. ಕನ್ಯಾಡಿ 1 ಗ್ರಾಮದ ಹರಿಶ್ಚಂದ್ರ ಗುಡಿಗಾರ ಎಂಬವರ ಮೇಲೆ ಅಕ್ರಮದ ಆಪಾದನೆ ಮಾಡಿದ್ದಾರೆ.

ಆರೋಪಿಯು ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಪ್ರಮೋದ್ ದಿಡುವರವರ ಮುಖಾಂತರ ಕನ್ಯಾಡಿ ಗ್ರಾಮದ ಸರ್ವೆ ನಂಬ್ರ 18 ಮತ್ತು ಸರಕಾರಿ ಕುಮ್ಮಿ ಸರ್ವೆ ನಂಬ್ರ 48 ರಲ್ಲಿರುವ ಜಮೀನಿನಿಂದ ಸಂಬಂಧಿಸಿದ ಇಲಾಖೆಯ ಯಾವುದೇ ಅನುಮತಿ ಪಡೆದುಕೊಳ್ಳದೆ ರಾಜರೋಷವಾಗಿ ಕಪ್ಪು ಕಲ್ಲನ್ನು ಸ್ಫೋಟಕ ಸಾಮಾಗ್ರಿ ಬಳಸಿಕೊಂಡು 1 ವರ್ಷದಿಂದ ಲೋಡುಗಟ್ಟಲೆ ಕಲ್ಲುಗಳನ್ನು ಲಾರಿಯಲ್ಲಿ ಸಾಗಿಸಿ ಮಾರಾಟ ಮಾಡುತ್ತಿದ್ದಾರೆ.

ಸ್ಫೋಟಕ ಬಳಕೆಯಿಂದ ಆಸುಪಾಸಿನ ಮನೆ, ಕೃಷಿ ಹೊಂದಿರುವ ಜಮೀನುಗಳಿಗೆ, ದನ ಕರುಗಳಿಗೆ ಹಾಗೂ ಹತ್ತಿರದಲ್ಲಿರುವ ಶಾಲೆಗೆ ಭಾರೀ ತೊಂದರೆಯಾಗುತ್ತಿದ್ದು, ಜೀವಹಾನಿ ಸಂಭವಿಸುವ ಸಾಧ್ಯತೆ ಇರುತ್ತದೆ. ಸದ್ರಿ ಸ್ಥಳವು ಮೀಸಲು ಅರಣ್ಯ ಕೂಡ ಆಗಿರುವುದರಿಂದ ಪ್ರಕೃತಿಗೂ, ಕಾಡುಪ್ರಾಣಿಗಳಗೂ ತೊಂದರೆಯಾಗುತ್ತಿದೆ. ಕೊಳವೆ ಬಾವಿಗಳಲ್ಲಿ ನೀರಿನ ಕೊರತೆ ಉಂಟಾಗುತ್ತಿದ್ದು, ಪ್ರಕೃತಿ ಸಂಪತ್ತನ್ನು ರಾಜಾರೋಷವಾಗಿ ದೋಚುತ್ತಿದ್ದಾರೆ. ಬಾವಿಗಳು ಅಪಾಯದಲ್ಲಿರುತ್ತದೆ. ಪ್ರಕೃತಿ ಸಂಪತ್ತನ್ನು ದೋಚುತ್ತಿರುವುದರಿಂದ ಸರಕಾರಕ್ಕೆ ಭಾರೀ ಪ್ರಮಾಣದಲ್ಲಿ ನಷ್ಟವಾಗಿರುತ್ತದೆ.

ಪ್ರಕೃತಿ ಸಂಪತ್ತನ್ನು ರಾಜರೋಷವಾಗಿ ಬಳಕೆ ಮಾಡುವುದನ್ನು ತಕ್ಷಣ ಪತ್ತೆ ಮಾಡಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಹಾಗೂ ಎಷ್ಟು ಘನ ಮೀಟರ್ ಹೋಗಿದೆ ಅಷ್ಟು ಪ್ರಮಾಣದಲ್ಲಿ ದಂಡವನ್ನು ವಸೂಲು ಮಾಡಿ ಸರಕಾರಕ್ಕೆ ಸಂದಾಯ ಮಾಡಿಕೊಳ್ಳಬೇಕು ಎಂದು ದೂರಿನಲ್ಲಿ ವಿನಂತಿಸಲಾಗಿದೆ. ಸದ್ರಿ ದೂರಿನ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಯಾವ ರೀತಿ ಕ್ರಮ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು