ಬೆಳ್ತಂಗಡಿ: ಎಡನೀರು ಶ್ರೀ ಶಂಕರಾಚಾರ್ಯ ಸಂಸ್ಥಾನದ ಶ್ರೀ ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವರ ದ್ವಿತೀಯ ಚಾತುರ್ಮಾಸ್ಯ ವೃತಾಚರಣೆ ಪ್ರಾರಂಭಗೊಂಡಿದ್ದು ಸೆ 9 ರ ವರೆಗೆ ನಡೆಯಲಿದೆ.
ಚಾತುರ್ಮಾಸ್ಯ ಪ್ರಯುಕ್ತ ಶ್ರೀ ಮಠದಲ್ಲಿ ವಿವಿಧ ಧಾರ್ಮಿಕ,ಸಾಹಿತ್ಯಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಸಭಾ ಕಾರ್ಯಕ್ರಮವನ್ನು ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ಅವರು ಉದ್ಘಾಟಿಸಿ ಶುಭಕೋರಿದರು. ಈ ಸಂದರ್ಭದಲ್ಲಿ ಅವರು ಶ್ರೀಗಳವರನ್ನು ಸನ್ಮಾನಿಸಿ ಗೌರವಿಸಿ ,ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಚಾತುರ್ಮಾಸ್ಯ ಶ್ರೀಗಳವರಿಗೆ ಆದ್ಯಾತ್ಮ ಚಿಂತನೆ,ಕಠಿಣ ವೃತಾಚರಣೆಗೆ ಸೀಮಿತವಾಗಿದ್ದರೂ ಭಕ್ತರು ಆಶೀರ್ವಾದ ಪಡೆಯಲು ಅನು ಕೂಲ ಸಮಯ. ಭಕ್ತರ ಭಾಗವಹಿಸುವಿಕೆಯಿಂದ ಚಾತುರ್ಮಾಸ್ಯ ಯಶಸ್ವಿಯಾಗುವುದು. . ಸಮಾಜದ ಬೆಳವಣಿಗೆಗೆ ಶ್ರೀಗಳವರ ಆಶೀರ್ವಾದ, ಮಾರ್ಗದರ್ಶನದ ಅಗತ್ಯವಿದೆ. ಯಾವುದೇ ಒಳ್ಳೆಯ ಕೆಲಸಕ್ಕೆ ಟೀಕೆ ಬರುವುದು ಸಹಜ . ಜವಾಬ್ದಾರಿಯಿಲ್ಲದವರು ಟೀಕೆ ಮಾಡುತ್ತಾರೆ ಎಂದರು.
ಅಧ್ಯಕ್ಷತೆಯನ್ನು ಕಾಸರಗೋಡು ಲೋಕ ಸಭಾ ಸದಸ್ಯ ರಾಜಮೋಹನ್ ಉಣ್ಣಿತ್ತಾನ್ , ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ,ಉದುಮ ಕ್ಷೇತ್ರದ ಮಾಜಿ ಶಾಸಕ ಕುಂಜ್ಹಿ ರಾಮನ್ ಮೊದಲಾದವರು ಉಪಸ್ಥಿತರಿದ್ದರು. ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಶಾಮ್ ಭಟ್ ಪ್ರಸ್ತಾವಿಸಿ, ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿ,ಕೈಯೂರು ನಾರಾಯಣ ಭಟ್ ವಂದಿಸಿದರು.
ಹಿರಣ್ಯ ವೆಂಕಟೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸಂಸ್ಥೆಗಳಿಂದ ಶ್ರೀಗಳವರಿಗೆ ಗೌರವಾರ್ಪಣೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಹನುಮಗಿರಿ ಮೇಳದ ಕಲಾವಿದರಿಂದ ಯಕ್ಷಗಾನ ಬಯಲಾಟ ಪ್ರದರ್ಶಿಸಲ್ಪಟ್ಟಿತು.