ಬೆಳ್ತಂಗಡಿ: ಬೆಳಾಲು ಗ್ರಾಮದ ಕೂಡಿಗೆ ಎಂಬಲ್ಲಿ ಹರಿಯುವ ನೇತ್ರಾವತಿ ನದಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಬುಧವಾರ ಪತ್ತೆಯಾಗಿದೆ.
ನದಿ ಮಧ್ಯಭಾಗದಲ್ಲಿ ಸಿಲುಕಿಕೊಂಡಿದ್ದ ತ್ಯಾಜ್ಯಗಳ ಮಧ್ಯೆ ಮೃತದೇಹ ಕಂಡುಬಂದಿತ್ತು. ಧರ್ಮಸ್ಥಳ ಠಾಣೆಯ ಪೊಲೀಸರು,ಬೆಳಾಲು ಶೌರ್ಯ ವಿಪತ್ತು ನಿರ್ವಹಣಾ ತಂಡದ ಸಹಕಾರದಲ್ಲಿ ಶವವನ್ನು ಮೇಲಕ್ಕೆತ್ತಿದ್ದಾರೆ. ನದಿಯಲ್ಲಿ ಮಂಗಳವಾರ ಸಂಜೆ ಭಾರಿ ಪ್ರಮಾಣದ ನೀರು ಹರಿದಿದ್ದು ಈ ವೇಳೆ ಮೇಲ್ಭಾಗದಿಂದ ಕೊಚ್ಚಿಕೊಂಡು ಬಂದಿರುವ ಶಂಕೆ ವ್ಯಕ್ತವಾಗಿದೆ. ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಮಹಿಳೆಯ ಮೃತದೇಹದ ಗುರುತು ಪತ್ತೆಹಚ್ಚಲಾಗದ ಸ್ಥಿತಿಯಲ್ಲಿದ್ದು,ಕೈಯಲ್ಲಿ ಬೆಳ್ಳಿಯ ಬಳೆ ಹಾಗೂ ಕಿವಿಯಲ್ಲಿ ಚಿನ್ನವನ್ನು ಹೋಲುವ ಕಿವಿಯೋಲೆಗಳಿವೆ. ಧರ್ಮಸ್ಥಳ ಠಾಣೆಯ ಪಿಎಸ್ ಐ ಅನಿಲ್ ಕುಮಾರ್ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸುದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಬೆಳಾಲು ಶೌರ್ಯ ತಂಡದ ಸ್ವಯಂ ಸೇವಕರಾದ ಮುಳುಗು ತಜ್ಞ ಹರೀಶ್ ಬೆಳಾಲು, ಸಂಯೋಜಕಿ ಆಶಾ, ರವೀಂದ್ರ,ಹರೀಶ್ ಮಂಜುನಾಥ್, ಜಯರಾಮ್, ವೇಣೂರು, ರಾಘವೇಂದ್ರ,ಹರೀಶ್, ಸಂಜೀವ, ಯಶೋಧರ, ಸಂತೋಷ್ ಕೆ. ಜಗದೀಶ್ ಮೃತದೇಹ ಮೇಲೆತ್ತಲು ಸಹಕರಿಸಿದರು.