ಬೆಳ್ತಂಗಡಿ: ಸೇವಾಭಾರತಿ ಕನ್ಯಾಡಿ ಇದರ ಅಂಗಸಂಸ್ಥೆ ಸೌತಡ್ಕದ “‘ಸೇವಾಧಾಮ”‘ ಬೆನ್ನುಹುರಿ ಅಪಘಾತಕ್ಕೊಳಗಾದವರ ಪುನಶ್ಚೇತನ ಕೇಂದ್ರದಲ್ಲಿ ಸಂಸ್ಥಾಪಕ ಕೆ. ವಿನಾಯಕ ರಾವ್ ರವರ 52ನೇ ವರ್ಷದ ಜನ್ಮದಿನಾಚರಣೆಯನ್ನು ಜು.29 ರಂದು ಸೇವಾಧಾಮ ಪರಿಸರದಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕೆ. ವಿನಾಯಕ ರಾವ್ ಮಾತನಾಡಿ” ಸೇವಾಧಾಮ”ದಲ್ಲಿ ಹುಟ್ಟುಹಬ್ಬ ಆಚರಣೆಗೆ 17 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದವರು ಜತೆಗಿರುವುದು ತುಂಬಾ ಸಂತೋಷ ನೀಡಿದೆ . ಅವರು ಸೇವಾಧಾಮದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅದರಿಂದ ಸಿಗುವ ಮಾಹಿತಿ, ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಪೂರ್ಣ ಪ್ರಯೋಜನ ಪಡೆದಲ್ಲಿ ಜನ್ಮ ದಿನಾಚರಣೆಯೂ ಸಾರ್ಥಕವನಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.
ಇತ್ತೀಚೆಗೆ ಬೆನ್ನುಹುರಿ ಅಪಘಾತಕ್ಕೊಳಗಾದ ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಧರ್ಣಪ್ಪ ಪೂಜಾರಿ ಹಾಗೂ ಕಡಬ ತಾಲೂಕು ಮರ್ಧಾಳ ಗ್ರಾಮದ ಗಿರೀಶ್ ರೈ ರವರಿಗೆ ಉಚಿತವಾಗಿ ಗಾಲಿಕುರ್ಚಿಗಳನ್ನು ವಿತರಿಸಲಾಯಿತು. ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೃಷ್ಣ ಭಟ್, ಸೇವಾಭಾರತಿಯ ಕಾರ್ಯದರ್ಶಿ ಸ್ವರ್ಣಗೌರಿ, ಟ್ರಸ್ಟಿ ಬಾಲಕೃಷ್ಣ, ಸಂಸ್ಥೆಯ ಹಿತೈಷಿ ಮಂಜುಳಾ ವಿ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸೇವಾಭಾರತಿ ಸಲಹಾ ಮಂಡಳಿಯ ಸದಸ್ಯರಾದ ವಿಷ್ಣು ಪ್ರಸಾದ್ ತೆಂಕಿಲ್ಲಾಯ, ಸ್ವಯಂ ಸೇವಕರು, ಸನಿವಾಸಿಗಳ ಪೋಷಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಕೌಂಟೆಂಟ್ .ಅಕ್ಷತಾ ಸ್ವಾಗತಿಸಿ, ನಿರೂಪಿಸಿದರು. ಸೀನಿಯರ್ ಮ್ಯಾನೇಜರ್ ಚರಣ್ ಕುಮಾರ್ ಎಂ. ವಂದಿಸಿದರು.