ಬೆಳ್ತಂಗಡಿ: ಆಫ್ರಿಕಾ ಖಂಡದ ಕೀನ್ಯಾ ದೇಶದ ಮೊಬಾಸಾ ಎಂಬಲ್ಲಿ ಕಣ್ಣಿನ ವೈದ್ಯರಾಗಿರುವ, ಬೆಳ್ತಂಗಡಿ ಬಜಕ್ಕಿರೆ ಸಾಲು ಮೂಲದ ಡಾl ವಿಶ್ವನಾಥ ಗೋಖಲೆ ಅವರು ತನ್ನ ನಿವಾಸದಲ್ಲಿ ತಿರಂಗಾ ಹಾರಿಸಿ ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸಿಕೊಂಡರು.
ತಿರಂಗಾವನ್ನು ಅವರು ಮೊಬಾಸಾದಲ್ಲಿನ ಭಾರತೀಯ ದೂತಾವಾಸದ ಉಪಕಚೇರಿಯಿಂದ ಪಡೆದುಕೊಂಡಿದ್ದರು. ಡಾl ಗೋಖಲೆ ಅವರು ಸುಮಾರು ಹತ್ತು ವರ್ಷದಿಂದ ಮೊಬಾಸದಲ್ಲಿ ವೈದ್ಯರಾಗಿ ಸೇವೆ ಮಾಡುತ್ತಿದ್ದಾರೆ. ಅವರ ಪತ್ನಿಯೂ ವೈದ್ಯರಾಗಿದ್ದಾರೆ.