ಮೈಸೂರು: ಆಮ್ ಆದ್ಮಿ ಪಾರ್ಟಿ ಮೈಸೂರು ಜಿಲ್ಲಾ ಘಟಕ ವತಿಯಿಂದ ಇಂದು 76ನೆಯ ಸ್ವಾತಂತ್ರ ದಿನಾಚರಣೆಯನ್ನು ಪಕ್ಷದ ಕಚೇರಿಯಲ್ಲಿ ಸಡಗರದಿಂದ ಆಚರಿಸಲಾಯಿತು.
ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಮಾಲವಿಕ ಗುಬ್ಬಿವಾಣಿ ಅವರ ಹಸ್ತದಿಂದ ಧ್ವಜಾರೋಹಣದ ನಂತರ ಸಾಮೂಹಿಕ ರಾಷ್ಟ್ರಗೀತೆ ಹಾಡಿ, ಸಿಹಿ ಹಂಚಲಾಯಿತು.
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಲವಿಕ ದೆಹಲಿಯ ಮುಖ್ಯಮಂತ್ರಿ ಕೇಜರಿವಾಲ್ ಅವರ ಸಂದೇಶ “ಸಮಾಜದಲ್ಲಿ ನಾವು ಅಪೇಕ್ಷಿಸುವ ಬದಲಾವಣೆ ನಮ್ಮಿಂದಲೇ ಪ್ರಾರಂಭವಾಗಲಿ” ಎಂಬುದನ್ನು ಪುನರುಚ್ಛರಿಸಿ ಪಕ್ಷದ ಕಾರ್ಯಕರ್ತರು ಆಮ್ ಆದ್ಮಿ ಪಾರ್ಟಿಯ ಸಂದೇಶವನ್ನು ಮನೆಮನೆಗೆ ತಲುಪಿಸಬೇಕೆಂದು ಹುರಿದುಂಬಿಸಿದರು.
ನಂತರ ಹಿರಿಯ ಕಾರ್ಯಕರ್ತರಾದ ಜಿ.ಆರ್.ವಿದ್ಯಾರಣ್ಯ ಮಾತನಾಡಿ ಆಪ್ ಪಕ್ಷದ ಸಂಸ್ಥಾಪನೆ ಹಾಗೂ ನಡೆದು ಬಂದ ದಾರಿ ವಿವರಿಸಿದರು.
ಇತ್ತೀಚೆಗೆ ಪ್ರಾರಂಭವಾಗಿರುವ “ರೇವಡಿ – ಎಲ್ಲವನ್ನೂ ಉಚಿತವಾಗಿ ಹಂಚಿದಲ್ಲಿ ರಾಜ್ಯದ ಆರ್ಥಿಕತೆ ಕೆಡುವುದಿಲ್ಲವೇ” ಎಂಬ ಚರ್ಚೆಯನ್ನು ಹೇಗೆ ಸಮರ್ಪಕವಾಗಿ ಉತ್ತರಿಸಬೇಕು ಎಂಬುದನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯಕರ್ತರಾದ ಉಷಾ ಸಂಪತ್ಕುಮಾರ್, ರಂಗಯ್ಯ, ಶಿವಕುಮಾರ್, ಹರ್ಷಾ, ಇರ್ಫಾನ್ ರಜ಼ಾಕ್, ದೀಪಕ್, ತಮ್ಮಯ್ಯ, ರವಿಚಂದ್ರ, ಇರ್ಫಾನ್ ಬೇಗ್, ಮೊಹಮ್ಮದ್ ಶೋಏಬ್, ವಿಶ್ವನಾಥ್, ಕುಮಾರ್, ಕವಿತಾ, ವಿನಯಾ, ಲಕ್ಷ್ಮೀ, ಪದ್ಮಾ, ಅಶ್ವಿನಿ, ಜುಬೇರ್, ಮೊದಲಾದವರು ಉಪಸ್ಥಿತರಿದ್ದರು.
ಪಕ್ಷದ ಎನ್.ಆರ್. ವಿಧಾನ ಸಭಾ ಘಟಕದ ವತಿಯಿಂದ ನಗರದ ಹಲವಾರು ವಾರ್ಡ್ ಕಚೇರಿಗಳಲ್ಲಿಯೂ ಇಂದು ಸ್ವಾತಂತ್ರ ದಿನಾಚರಣೆ ಆಚರಿಸಲಾಯಿತು. ನೆನ್ನೆಯ ಸಂಜೆ ಎನ್.ಆರ್. ಕ್ಷೇತ್ರದ ನಾಯಕಿ ಧರ್ಮಶ್ರೀ ಅವರ ನೇತೃತ್ವದಲ್ಲಿ ಸೈಕಲ್ ತಿರಂಗಾ ಯಾತ್ರಾ ಆಯೋಜಿಸಲಾಗಿತ್ತು.