ಬೆಳ್ತಂಗಡಿ: ಶ್ರೀ ದುರ್ಗಾ ಮಾತೃಮಂಡಳಿ ಕನ್ಯಾಡಿ ವತಿಯಿಂದ ಕನ್ಯಾಡಿ ಹಿ.ಪ್ರಾ.ಶಾಲೆಯಲ್ಲಿ ಪುರೋಹಿತರಾದ ಅಜಯ್ ಹೆಬ್ಬಾರ್ ನೇತೃತ್ವದಲ್ಲಿ 16 ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆ ನೆರವೇರಿತು.
ಶ್ರೀ ದುರ್ಗಾ ಮಾತೃಮಂಡಳಿ ಕನ್ಯಾಡಿ ಅಧ್ಯಕ್ಷೆ ಶಾಂತಾ ಶೆಟ್ಟಿ, ಕಾರ್ಯದರ್ಶಿ ಪೂರ್ಣಿ, ಕೋಶಾಧಿಕಾರಿ ಬಬಿತಾ, ಸೇವಾಭಾರತಿ ಅಧ್ಯಕ್ಷರಾದ ವಿನಾಯಕ್ ರಾವ್, ಕಾರ್ಯದರ್ಶಿ ಸ್ವರ್ಣಗೌರಿ ಸೇರಿದಂತೆ 150 ಕ್ಕೂ ಅಧಿಕ ಮಂದಿ ಮಹಿಳಾ ಭಕ್ತರು ಉಪಸ್ಥಿತರಿದ್ದರು.