News Karnataka Kannada
Wednesday, May 01 2024
ಮಂಗಳೂರು

ಬಾರ್ ನಲ್ಲಿ ತಂಡದಿಂದ ಹಲ್ಲೆ: ಪ್ರಕರಣ ದಾಖಲು

Students offer namaz at school, teachers thrashed
Photo Credit : IANS

ಬಂಟ್ವಾಳ: ಊಟ ಮಾಡಲು ಬಾರ್ ಒಂದಕ್ಕೆ ತೆರಳಿದ ಮೂವರ ಮೇಲೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದಲ್ಲಿರುವ ಬಾರೊಂದರಲ್ಲಿ ನಡೆದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ತಾಲೂಕು ಕೇಪುಗ್ರಾಮದ ಬಡಕೋಡಿ ನಿವಾಸಿ ವಿಶ್ವನಾಥ ರವರ ಪುತ್ರ ಸುರೇಶ್ ದೂರುದಾರರಾಗಿದ್ದಾರೆ. ನಿಶಾಂತ್ ಶೆಟ್ಟಿ, ರಾಕೇಶ್‌, ಚೇತು ಯಾನೆ ಚೇತನ್‌ ಪ್ರಕರಣದ ಆರೋಪಿಗಳಾಗಿದ್ದಾರೆ.

ನಾನು ಕೇಪು ಗ್ರಾಮದ ಗಣೇಶ್ ಮತ್ತು ವಿಟ್ಲದ ಸುರೇಶ್ ರವರೊಂದಿಗೆ ಜು. 21 ರಂದು ರಾತ್ರಿ ಬಂಟ್ವಾಳ ತಾಲೂಕು, ವಿಟ್ಲಕಸಬಾ ಗ್ರಾಮದ, ಬಾರೊಂದಕ್ಕೆ ಊಟಕ್ಕೆಂದು ತೆರಳಿ ಅಲ್ಲಿ ಮಾತನಾಡುತ್ತಿದ್ದ‌ ವೇಳೆ ಆರೋಪಿ ನಿಶಾಂತ್ ಶೆಟ್ಟಿ ನನ್ನ ಮೇಲಿನ ಯಾವುದೋ ಹಳೆಯ ದ್ವೇಷದಿಂದ ಅವಾಚ್ಯ ಶಬ್ದಗಳಿಂದ ಬೈದು ತಂಡದೊಂದಿಗೆ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ.ಈ ವೇಳೆ ತಡೆಯಲು ಬಂದ ನನ್ನ ಸ್ನೇಹಿತರ ಮೇಲೂ ತಂಡ ಹಲ್ಲೆ ನಡೆಸಿದೆ. ಬಳಿಕ ಬಾರ್ ನ ಸಿಬ್ಬಂದಿಗಳು ಬಂದು ತಡೆದಾಗ ತಂಡ  ಜೀವಬೆದರಿಕೆ ಒಡ್ಡಿ ಪರಾರಿಯಾಗಿದೆ‌.

ಘಟನೆಯಿಂದ ಗಾಯಗೊಂಡಿದ್ದ ನನ್ನನ್ನು ಸ್ನೇಹಿತರು ಪುತ್ತೂರು ಆಸ್ಲತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ಗಣೇಶ್ ರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು