ಬಂಟ್ವಾಳ: ನವರಾತ್ರಿ ಸಂದರ್ಭದಲ್ಲಿ ಶಾರ್ದೂಲ ವೇಷ ಧರಿಸಿದ್ದ ಶ್ರೀ ಕಾವೇಶ್ವರ ಫ್ರೆಂಡ್ಸ್ ತಂಡದ ಸದಸ್ಯರು ಸಂಗ್ರಹವಾದ ಎಲ್ಲಾ ಹಣವನ್ನು ಸಮಾಜ ಸೇವೆಗೆ ಬಳಸಿದ್ದಾರೆ.
ತೆಂಕಬೆಳ್ಳೂರು, ಬಡಗ ಬೆಳ್ಳೂರು ಪರಿಸರದಲ್ಲಿ ಹಲವಾರು ವರ್ಷಗಳಿಂದ ಶಾರ್ದೂಲ ವೇಷ ಧರಿಸುವ ಈ ತಂಡ ನವರಾತ್ರಿ ಮುಗಿದ ಕೂಡಲೇ ತಮ್ಮ ಗಳಿಕೆಯ ಎಲ್ಲಾ ಹಣ ವನ್ನು ತಮ್ಮ ಸ್ವಂತಕ್ಕೆ ಉಪಯೋಗಿಸದೆ ಊರಿನ ತೀರಾ ಬಡತನ ದಲ್ಲಿ ಇರುವ ಆಯ್ದ ಕುಟುಂಬಗಳಿಗೆ ತಲಾ 30ಕೆಜಿ ಅಕ್ಕಿ ಯಂತೆ ವಿತರಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.