ಕಾಸರಗೋಡು: ತೃಶ್ಯೂರು ವಡಕ್ಕಂಚೇರಿಯಲ್ಲಿ ಬಸ್ಸು ಅಪಘಾತದಲ್ಲಿ ಮೃತಪಟ್ಟವರಲ್ಲಿ ಕಾಸರಗೋಡು ಮೂಲದ ವಿದ್ಯಾರ್ಥಿನಿ ಒಳಗೊಂಡಿದ್ದಾರೆ. ಅಪಘಾತದಲ್ಲಿ 9 ಮಂದಿ ಮೃತಪಟ್ಟಿದ್ದು, ಈ ಪೈಕಿ ಆರು ಮಂದಿ ವಿದ್ಯಾರ್ಥಿಗಳು ಸೇರಿದ್ದಾರೆ.
ಈ ಪೈಕಿ ಕಾಸರಗೊಂಡು ಬಳ೦ತ್ತೋಡಿನ ಜೋಸೆಫ್ – ಶೈನಿ ದಂಪತಿ ಪುತ್ರಿ ಎಲ್ನಾ ಜೋಸ್ ( 15) ಮೃತಪಟ್ಟಿದ್ದಾರೆ. ಇವರ ಕುಟುಂಬ ಪ್ರಸ್ತುತ ಎರ್ನಾಕುಳಂ ನಲ್ಲಿ ವಾಸಿಸುತ್ತಿದ್ದಾರೆ.
ಬುಧವಾರ ತಡರಾತ್ರಿ ಅಪಘಾತ ನಡೆದಿತ್ತು. ಎರ್ನಾಕುಲಂ ಮುಳುಂ ಮುಳುಂಪುರತ್ ವೆಟ್ಟಿಕಲ್ ಮಾರ್ ಬಸೆಲಿಯಾಸ್ ವಿದ್ಯಾರ್ಥಿಗಳು ಊಟಿಗೆ ಪ್ರವಾಸಕ್ಕೆ ಬಸ್ಸು ವಡಕ್ಕಂಚೇರಿಯಲ್ಲಿ ಕೆ.ಎಸ್ ಆರ್.ಟಿ.ಸಿ ಬಸ್ಸಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಮಗುಚಿ ಬಿದ್ದ ಪರಿಣಾಮ 9 ಮಂದಿ ಮೃತಪಟ್ಟು, 50 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.