ಬಂಟ್ವಾಳ: ನೇರಳಕಟ್ಟೆ ಸಮೀಪದ ಏಮಾಜೆ ಎಂಬಲ್ಲಿ ಒಂದೇ ದಿನ 6 ದನಗಳನ್ನು ಕಳವು ಮಾಡಲಾಗಿದ್ದು, ದನಗಳ ಮಾಲಕರ ಮನೆಗಳಿಗೆ ಬಂಟ್ವಾಳ ಶಾಸಕ ರಾಜೇಶ್ ಉಳಿಪ್ಪಾಡಿಗುತ್ತು ಅವರು ಭೇಟಿ ನೀಡಿದರು.
ದನಗಳನ್ನು ಕಳವು ಮಾಡಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕಾನೂನು ಕ್ರಮಕೈಗೊಳ್ಳುವಂತೆ ಸ್ಥಳಕ್ಕೆ ಬಂದಿದ್ದ ವಿಟ್ಲ ವೃತ್ತ ನಿರೀಕ್ಷಕ ಎಚ್ ನಾಗರಾಜ್ ಅವರಿಗೆ ಶಾಸಕರು ಸೂಚನೆ ನೀಡಿದರು.
ನೆಟ್ಲಮುಡ್ನೂರು ಗ್ರಾಮದ ಏಮಾಜೆ ಪರಿಸರದಲ್ಲಿ ಕಳೆದ ಕೆಲ ದಿನಗಳ ಹಿಂದೆ ಐದಾರು ಮನೆಗಳಿಂದ ಒಂದೇ ದಿನ 6 ದನಗಳು ಕಳವಾಗಿರುವ ಬಗ್ಗೆ ವಿಟ್ಲ ಪೋಲೀಸ್ ಠಾಣೆಯ ಲ್ಲಿ ದೂರು ದಾಖಲಾಗಿತ್ತು, ಈ ಕುರಿತಾಗಿ ಸ್ಥಳೀಯರಾದ ದಾಮೋದರ ಏಮಾಜೆ, ಹೊನ್ನಮ್ಮ, ಪೂವಪ್ಪ ಅವರು ಠಾಣೆಗೆ ದೂರು ನೀಡಿದ್ದರು. ಶಾಸಕರ ಭೇಟಿ ವೇಳೆ ಪ್ರಮುಖರಾದ ತನಿಯಪ್ಪ ಗೌಡ, ಆಶೋಕ್ ರೈ, ರಾಧಕೃಷ್ಣ ಅಡ್ಯಂತಾಯ, ಸುರೇಶ್ ಭಟ್ ಇಡ್ಕಿದು, ನರಸಿಂಹ ಮಾಣಿ, ಜಗದೀಶ್ , ನೀಲಯ್ಯ ಮತ್ತಿತರರು ಉಪಸ್ಥಿತರಿದ್ದರು.