News Karnataka Kannada
Tuesday, April 30 2024
ಮಂಗಳೂರು

ಮಂಗಳೂರು: ಮಸೀದಿಗೆ ಕನ್ನ ಹಾಕಿದ ಕಳ್ಳರು, 6 ಕಾಣಿಕೆ ಡಬ್ಬಿಗಳನ್ನು ಒಡೆದು ನಗದು ಕಳವು

Thieves break into mosque, break 6 donation boxes, steal cash
Photo Credit : News Kannada

ಮಂಗಳೂರು: ಕೊಣಾಜೆ ಠಾಣೆ ವ್ಯಾಪ್ತಿಯ ಪಜೀರು ಗ್ರಾಮದ ಅರ್ಕಾಣ ಬದ್ರಿಯ ಜುಮಾ ಮಸೀದಿಗೆ ಕಳ್ಳರು ನುಗ್ಗಿ 6ಕಾಣಿಕೆ ಹುಂಡಿಯಿಂದ ನಗದು ಕಳವುಗೈದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಮಂಗಳವಾರ ಮಧ್ಯರಾತ್ರಿ ವೇಳೆ ಮಸೀದಿಯ ಪಕ್ಕದ ಕೋಣೆಯ ಒಂದರಲ್ಲಿದ್ದ ಪಿಕ್ಕಾಸು ಹಾರೆ ಯನ್ನು ಬಳಸಿ ಮಸೀದಿಯ ಆವರಣ ಗೋಡೆಯ ಮೇಲಿದ್ದ ಒಟ್ಟು 6ಕಾಣಿಕೆ ಹುಂಡಿಗಳನ್ನು ಒಡೆದು ನಗದು ಕಳವುಗೈಯಲಾಗಿದೆ ಕಳ್ಳತನದ ಕೃತ್ಯ ಸಿಸಿಟಿವಿಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಓರ್ವ ವ್ಯಕ್ತಿ ಕಳವುಗೈದಿರುವ ದೃಶ್ಯ ಕಂಡುಬಂದಿದೆ.

ಮೊದಲು ಹೊರಗಿನ ಕಾಣಿಕೆ ಡಬ್ಬಿಯನ್ನು ಮುರಿದು ಕಳ್ಳ ಬಳಿಕ ಹಾರೆಯ ಸಹಾಯದಿಂದ ಮಸೀದಿಯ ಬಾಗಿಲಿನ ಚೀಲವನ್ನು  ಒಡೆದು ಒಳಗೆ ನುಗ್ಗಿದ್ದಾನೆ. ಅಲ್ಲಿದ್ದ ಕಾಣಿಕೆ ಡಬ್ಬಿಗಳನ್ನು ಒಡೆದು ನಗದು ದೋಚಿದ್ದಾನೆ. ಮಸೀದಿ ಕಚೇರಿಯ ಬಾಗಿಲನ್ನು ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಶಾಸಕ ಯು ಟಿ ಖಾದರ್ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಕೃತ್ಯಕ್ಕೆ ಮಸೀದಿಗೆ ಸಂಬಂಧಿಸಿದ ಪಿಕ್ಕಾಸು ಹಾರೆ ಬಳಕೆ ಮಾಡಿ ಎಲ್ಲ ಕಾಣಿಕೆ ಡಬ್ಬಿಗಳನ್ನು ಕಳ್ಳತನ ಮಾಡಿರುವ ಸ್ಪಷ್ಟವಾಗಿ ಗಮನಿಸಿದರೆ ಮಾಹಿತಿ ಇರುವ ವ್ಯಕ್ತಿಯೇ ಕಳ್ಳತನ ನಡೆಸಿರುವ ಶಂಕೆಯಿದೆಯೆಂದು ಮಸೀದಿ ಕಾರ್ಯದರ್ಶಿ ಶಫೀಕ್ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು