News Karnataka Kannada
Saturday, May 04 2024
ಮಂಗಳೂರು

ಬಂಟ್ವಾಳ: ಪ್ರೇತದ ವೇಷ ಹಾಕಿ ಅಶಕ್ತರಿಗೆ ನೆರವಾದ ದೇವದಾಸ್!

Bantwal (1)
Photo Credit : By Author

ಬಂಟ್ವಾಳ: ಕಿಡ್ನಿ ಸಮಸ್ಯೆಯಲ್ಲಿರುವ ಇಬ್ಬರು ಮಕ್ಕಳ ಚಿಕಿತ್ಸೆ ಹಾಗೂ ಬಡ ಕುಟುಂಬದ ಯುವತಿಯೊಬ್ಬಳ ಮದುವೆಗೆ ನೆರವು ನೀಡುವ ಉದ್ದೇಶದಿಂದ ೨೦ ಸಾವಿರ ರೂ.ಗಳ ಗುರಿಯೊಂದಿಗೆ ನವರಾತ್ರಿಯ ಸಂದರ್ಭದಲ್ಲಿ ಪ್ರೇತದ ವೇಷ ಹಾಕಿ ಊರೂರು ಸಂಚರಿಸಿದ್ದ ಸರಪಾಡಿಯ ದೇವದಾಸ್ ನಾಯ್ಕ್ ಅವರಿಗೆ ಸಂಗ್ರಹಗೊಂಡದ್ದು ಬರೋಬ್ಬರಿ ೫೭ ಸಾವಿರ ರೂ.

ಅ.೧೨ರಂದು ಅವರು ಮೊತ್ತವನ್ನು ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ಸಂಬಂಧಪಟ್ಟ ಕುಟುಂಬಗಳಿಗೆ ಹಸ್ತಾಂತರಿಸಿದರು. ಕ್ಷೇತ್ರದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ ಪ್ರಾರ್ಥನೆಯ ಮೂಲಕ ಹಾರೈಸಿದರು. ಕಿಡ್ನಿ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವ ಕಲ್ಲಡ್ಕ ನಿವಾಸಿ ಇಬ್ಬರು ಮಕ್ಕಳ ಕುಟುಂಬಕ್ಕೆ ೩೦ ಸಾವಿರ ರೂ. ಹಾಗೂ ಮಣಿನಾಲ್ಕೂರು ಗ್ರಾಮ ನಿವಾಸಿ ಯುವತಿಯ ಮದುವೆಗೆ ೨೦ ಸಾವಿರ ರೂ. ನೀಡಿದರು.

ಉಳಿದಂತೆ ಸುಮಾರು ೭ ಸಾವಿರ ರೂ.ಮೊತ್ತವನ್ನು ಸರಪಾಡಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಹಸ್ತಾಂತರಿಸಿದರು.

ಮೊತ್ತ ಹಸ್ತಾಂತರದ ವೇಳೆ ದೇವಸ್ಥಾನದ ಅರ್ಚಕ ಜಯರಾಮ ಕಾರಂತ, ಸ್ಥಳೀಯ ಪ್ರಮುಖರಾದ ಉಮೇಶ್ ಆಳ್ವ ಕೊಟ್ಟುಂಜ, ಸುರೇಶ್ ಶೆಟ್ಟಿ ಮೀಯಾರು, ದಿನೇಶ್ ಗೌಡ ನೀರೊಲ್ಬೆ, ಆನಂದ ಶೆಟ್ಟಿ ಬಾಚಕೆರೆ, ಶುಭಕರ ರೈ ಕೊಟ್ಟುಂಜ, ಗಿರೀಶ್ ನಾಯ್ಕ್ ನೀರಪಲ್ಕೆ, ಸತೀಶ್ ಗೌಡ ಕೊಪ್ಪಲ, ನಾರಾಯಣ ದೇವಾಡಿಗ ಹೊಳ್ಳರಗುತ್ತು, ಚಂದ್ರಶೇಖರ ನಾಯ್ಕ್, ದೇವದಾಸ್ ಅವರ ತಾಯಿ ಲಕ್ಷ್ಮೀ ಮೊದಲಾದರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು