News Karnataka Kannada
Monday, April 29 2024
ಮಂಗಳೂರು

ಮಂಗಳೂರು: ಸೆ. 09 ರಂದು ಮೇಯರ್, ಉಪಮೇಯರ್ ಸ್ಥಾನಕ್ಕೆ ಚುನಾವಣೆ

Elections for mayor, deputy mayor posts to be held on May 09
Photo Credit : News Kannada

ಮಂಗಳೂರು:  ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್, ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸದಸ್ಯರುಗಳ ಚುನಾವಣೆಯನ್ನು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸೆ. 09ರ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇಬ್ಬರು ಶಾಸಕರಿದ್ದು, ಮೇಯರ್‌ ಆಯ್ಕೆಯಲ್ಲಿ ಅವರ ಪಾತ್ರವೂ ಪ್ರಮುಖವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರ ಜತೆಯೂ ಶಾಸಕರು, ಮುಖಂಡರು ಮೇಯರ್‌ ಆಯ್ಕೆ ಬಗ್ಗೆ ಚರ್ಚೆ ನಡೆಸಿದ್ದು, 9 ರಂದು ಬೆಳಗ್ಗೆ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲೇ ಅದನ್ನು ಘೋಷಿಸಲಾಗುತ್ತದೆ. ಮೇಯರ್‌ ಸ್ಥಾನ ಸಾಮಾನ್ಯ ವರ್ಗಕ್ಕೆ ಮತ್ತು ಉಪ ಮೇಯರ್‌ ಸ್ಥಾನ ಹಿಂದುಳಿದ ವರ್ಗದ ಮಹಿಳೆಗೆ ಮೀಸಲಾಗಿದೆ.

ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಆ ಸಂದರ್ಭದಲ್ಲಿ ರಾಜಕೀಯ ಅನುಭವ, ಮಹಾ ನಗರ ಪಾಲಿಕೆಯ ಮೇಲೆ ಪೂರ್ಣ ಹಿಡಿತ, ಚುನಾವಣೆ ಸಂದರ್ಭದಲ್ಲಿ ತನು ಮನ ಧನದೊಂದಿಗೆ ಓಡಾಟ ನಡೆಸುವ ಅಭ್ಯರ್ಥಿಯನ್ನು ಮೇಯರ್‌ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅನುಭವ, ಸಾಮರ್ಥ್ಯದ ಜತೆ ವಾರ್ಡ್‌, ಜಾತಿ ಲೆಕ್ಕಾಚಾರ ಕೂಡಾ ತುಲನೆಯಾಗುತ್ತಿದೆ.

ಈ ಬಾರಿ ಮೇಯರ್‌ ಸ್ಥಾನ ಸಾಮಾನ್ಯ ವರ್ಗಕ್ಕೆ ಮತ್ತು ಉಪ ಮೇಯರ್‌ ಸ್ಥಾನ ಹಿಂದುಳಿದ ವರ್ಗದ ಮಹಿಳೆಗೆ ಮೀಸಲಾಗಿದೆ. ಎಲ್ಲ ಕಾರ್ಪೊರೇಟರ್‌ಗಳೂ ಮೇಯರ್‌ ಆಗಲು ಅರ್ಹರು. ಬಿಜೆಪಿ ಆಡಳಿತದಲ್ಲಿದ್ದು, ಸುಧೀರ್‌ ಶೆಟ್ಟಿ ಕಣ್ಣೂರು, ಕಿರಣ್‌ ಕೋಡಿಕಲ್‌, ಜಯಾನಂದ, ಶರತ್‌ ಮೇಯರ್‌ ರೇಸ್‌ನಲ್ಲಿರುವ ಪ್ರಮುಖರು.

ಹಿಂದಿನ ಎರಡು ಅವಧಿಗೆ ಮಂಗಳೂರು ನಗರ ದಕ್ಷಿಣದ ಅಭ್ಯರ್ಥಿ ಮೇಯರ್‌ ಆಗಿದ್ದರು. ಅದು ಕೂಡಾ ಗಣನೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಮುಂದಿನ 24ನೇ ಅವಧಿಗೂ ಈಗಾಗಲೇ ಮೀಸಲಾತಿ ಪ್ರಕಟವಾಗಿದ್ದು, ಅದನ್ನು ಕೂಡಾ ಈಗಿನ ಆಯ್ಕೆ ವೇಳೆ ಲೆಕ್ಕಾಚಾರ ಹಾಕಲಾಗುತ್ತಿದೆ. ಉಪ ಮೇಯರ್‌ ಆಯ್ಕೆ ಅನಾಯಾಸವಾಗಿ ನಡೆಯಲಿದ್ದು, ಅಭ್ಯರ್ಥಿ ಆಯ್ಕೆ ಬಹುತೇಕ ಅಂತಿಮಗೊಳಿಸಲಾಗಿದೆ.

2019ರ ನವೆಂಬರ್ 12 ರಂದು ನಡೆದಿದ್ದ ಪಾಲಿಕೆ ಚುನಾವಣೆಯ 60 ವಾರ್ಡ್‌ನಲ್ಲಿ ಬಿಜೆಪಿ 44 ಸ್ಥಾನಗಳನ್ನು ಗೆದ್ದು ಅಧಿಕಾರ ವಹಿಸಿಕೊಂಡಿತ್ತು. ಕಾಂಗ್ರೆಸ್‌ 14 ಮತ್ತು ಎಸ್‌ಡಿಪಿಐ ಎರಡು ಸ್ಥಾನಗಳನ್ನು ಗೆದ್ದುಕೊಂಡಿತ್ತು. 2020ರ ಫೆಬ್ರುವರಿ 29 ರಂದು ನಡೆದ ಚುನಾವಣೆಯಲ್ಲಿ ಪ್ರಥಮ ಅವಧಿಗೆ ದಿವಾಕರ್‌ ಪಾಂಡೇಶ್ವರ ಮೇಯರ್‌ ಮತ್ತು ಉಪ ಮೇಯರ್‌ ಆಗಿ ಜಾನಕಿ, ವೇದಾವತಿ ಆಯ್ಕೆಯಾಗಿದ್ದರು. 2021ರ ಮಾರ್ಚ್ 2 ರಂದು ನಡೆದ ದ್ವಿತೀಯ ಅವಧಿಯ ಚುನಾವಣೆಯಲ್ಲಿ ಮೇಯರ್‌ ಆಗಿ ಪ್ರೇಮಾನಂದ ಶೆಟ್ಟಿ ಮತ್ತು ಉಪ ಮೇಯರ್‌ ಆಗಿ ಸುಮಂಗಳಾ ರಾವ್‌ ಆಯ್ಕೆಯಾಗಿದ್ದರು.

ಈ ವರ್ಷ ಮಾರ್ಚ್ 2 ರಂದು ಮೇಯರ್‌ – ಉಪ ಮೇಯರ್‌ ಚುನಾವಣೆ ನಿಗದಿಯಾಗಿದ್ದರೂ, ಬೇರೆ ಕಡೆಯ ಮೀಸಲಾತಿ ಸಮಸ್ಯೆಯಿಂದ ಇಲ್ಲಿಯ ಚುನಾವಣೆಯನ್ನೂ ತಡೆ ಹಿಡಿಯಲಾಗಿತ್ತು. ಹಾಗಾಗಿ ಮುಂದಿನ ಆರು ತಿಂಗಳು ಪ್ರೇಮಾನಂದ ಶೆಟ್ಟಿ ಮತ್ತು ಸುಮಂಗಳಾ ರಾವ್‌ ಅವಧಿ ಮುಂದುವರಿದಿತ್ತು. ಸೆಪ್ಟೆಂಬರ್ 9 ರಂದು ಮೈಸೂರು ವಿಭಾಗೀಯ ಅಧಿಕಾರಿ ಚುನಾವಣೆ ನಡೆಸಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು