ಬಂಟ್ವಾಳ: ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಹಿನ್ನೆಲೆಯಲ್ಲಿ ಎ.ಜೆ.ಮೆಡಿಕಲ್ ಕಾಲೇಜು ಮತ್ತು ಇಂಡಿಯನ್ ಕ್ಯಾನ್ಸರ್ ಸೊಸೈಟಿ ವತಿಯಿಂದ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ಶಿಬಿರ ನಡೆಯಿತು.
ಈ ಸಂದರ್ಭ ಬಸ್ತಿಪಡ್ಪುವಿನ ಭದ್ರಾ ಗ್ಯಾಸ್ ಏಜನ್ಸಿ ಮುಂಭಾಗದಿಂದ ಬಂಟ್ವಾಳ ತಾಲೂಕು ಆಸ್ಪತ್ರೆವರೆಗೆ ಕ್ಯಾನ್ಸರ್ ಮಾಹಿತಿ ನೀಡುವ ಕಾಲ್ನಡಿಗೆ ಜಾಥಾ ನಡೆಯಿತು. ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ರೈ ಅವರು ಜಾಥಾ ಉದ್ಘಾಟಿಸಿದರು.
ಆಶಾ ಕಾರ್ಯಕರ್ತೆಯರು, ಎ.ಜೆ. ಆಸ್ಪತ್ರೆ ಕಾಲೇಜಿನ ವಿದ್ಯಾರ್ಥಿಗಳು, ಕ್ಯಾನ್ಸರ್ ಸೊಸೈಟಿ ಸಿಬ್ಬಂದಿ ಪಾಲ್ಗೊಂಡರು. ಬಳಿಕ ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಮಾಹಿತಿ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆಯನ್ನು ಸಮುದಾಯ ವಿಭಾಗ ಮುಖ್ಯಸ್ಥ ಡಾ. ಸಂಜೀವ್ ಬಡಿಗೇರ್ ವಹಿಸಿ ಕ್ಯಾನ್ಸರ್ ಕುರಿತ ವಿಚಾರಗಳನ್ನು ತಿಳಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ರೈ, ಬಂಟ್ವಾಳ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪುಷ್ಪಲತಾ, ದಂತವೈದ್ಯೆ ಡಾ. ಆರತಿ, ಸಮುದಾಯ ವಿಭಾಗದ ಪ್ರೊಫೆಸರ್ ಡಾ. ಮರಿಯಾ, ಡಾ.ಸುಶಾಂತ್, ಡಾ. ಶಂಭುಲಿಂಗ ಡಾ. ಜಯಮಾಲಾ ಪಾಲ್ಗೊಂಡರು.
ಕ್ಯಾನ್ಸರ್ ಕುರಿತು ಸಮುದಾಯ ವಿಭಾಗದ ಡಾ. ನಿಧಿ ಶೆಟ್ಟಿ, ಡಾ.ಶ್ರೀಶಾನಂದ್ ಶೆಟ್ಟಿ, ಡಾ.ಸುವಾಂಶಿ ಶೆಟ್ಟಿ, ಡಾ.ಆರತಿ, ಅವರು ವಿವಿಧ ಬಗೆಯ ಕ್ಯಾನ್ಸರ್ ರೋಗದ ಬಗ್ಗೆ ಮಾಹಿತಿ ನೀಡಿದರು.
ಇಂಡಿಯನ್ ಕ್ಯಾನ್ಸರ್ ಸೊಸೈಟಿ ಪ್ರಾಯೋಕತ್ವದಲ್ಲಿ ನಡೆದ ಕ್ಯಾನ್ಸರ್ ತಪಾಸಣೆಯನ್ನು ಎ.ಜೆ.ಆಸ್ಪತ್ರೆ ತಜ್ಞ ವೈದ್ಯರು ನಿರ್ವಹಿಸಿದರು.