ಬೆಳ್ತಂಗಡಿ: ಪುನರ್ನಿರ್ಮಾಣಗೊಳ್ಳುತ್ತಿರುವ ಅಳದಂಗಡಿ ಫಲ್ಗುಣಿ ತೀರದಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಗರ್ಭಗುಡಿಯ ಮೇಲೆ ಪ್ರತಿಷ್ಠಾಪಿಸುವ ಮುಗುಳಿಯನ್ನು ಶ್ರೀಕ್ಷೇತ್ರದ ವತಿಯಿಂದ ಬುಧವಾರ ಹಸ್ತಾಂತರಿಸಿದರು.
ಈಗಾಗಲೇ ಅವರು ರೂ.10 ಲಕ್ಷದ ಧನಸಹಾಯವನ್ನು ಪ್ರಸಾದರೂಪವಾಗಿ ನೀಡಿದ್ದಾರಲ್ಲದೆ, ಗಣಪತಿಯ ನೂತನ ವಿಗ್ರಹವನ್ನೂ ಮಾಡಿಸಿಕೊಟ್ಟಿರುತ್ತಾರೆ. ವಿಗ್ರಹವನ್ನು ಜನವರಿ 29 ರಂದು ಕಾರ್ಕಳದಿಂದ ಮೆರವಣಿಗೆಯ ಮೂಲಕ ತರಲಾಗುವುದು.
ಹೆಗ್ಗಡೆಯವರು ಫೆಬ್ರುವರಿ 4 ರಂದು ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಆಶೀರ್ವದಿಸಲಿದ್ದಾರೆ. ಹೆಗ್ಗಡೆಯವರ ಭೇಟಿಯ ಸಂದರ್ಭ ಹಿರಿಯರಾದ ಶ್ರೀ ವಸಂತ ಸಾಲಿಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾl ಶಶಿಧರ ಡೋಂಗ್ರೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಂಗಾಧರ ಮಿತ್ತಮಾರು, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ನೊಚ್ಚ, ಕೋಶಾಧಿಕಾರಿ ಅನಿಲ್ಕುಮಾರ್ ಮಾಳಿಗೆ ಮನೆ, ಸದಸ್ಯರಾದ ಜಗನ್ನಾಥ ಶೆಟ್ಟಿ, ಸುರೇಶ್ ಶೆಟ್ಟಿ ಕುರೆಲ್ಯ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಪಿನಡ್ಕ, ಸದಸ್ಯ ನವೀನ್ ಕೆ.ಸಾಮಾನಿ ಧ.ಗ್ರಾ.ಯೋಜನೆಯ ಮೇಲ್ವಿಚಾರಕಿ ಸುಮಂಗಲಾ, ಪಿಲ್ಯ ಸೇವಾಪ್ರತಿನಿಧಿ ಹರಿಣಾಕ್ಷಿ ಇದ್ದರು.