ಮಂಗಳೂರು: ಸಂತ ಅಲೋಶಿಯಸ್ ಪ್ರೌಢಶಾಲೆಯ 1979-89ರ ಸಹಪಾಠಿಗಳ ಸಂಘದ ವತಿಯಿಂದ ಸಂಘದ ಸದಸ್ಯರ ಮಕ್ಕಳಲ್ಲಿಯೂ ಹತ್ತನೇ ಹಾಗೂ ಪಿಯುಸಿಯ ಪ್ರತಿಭಾವಂತರನ್ನು ಸನ್ಮಾನಿಸಲಾಯಿತು. ಮೈಕಲ್ ಡಿಸೋಜ ಕಾರ್ಯಕ್ರಮ ನೆರವೇರಿಸಿದರು.
ಪುರಸ್ಕಾರ ಪಡೆದ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು. ಸಂಘದ ಅಡ್ಮಿನ್ ಗಳಾದ ಶ್ರೀ ಪ್ರಶಾಂತ್ ಕೆಪಿ ಪ್ರಸ್ತಾವಿಕವಾಗಿ ಮಾತನಾಡಿದರು ಜಾಹಿರ್ ಮಾಣಿಪ್ಪಾಡಿ ಸಂಘದ ಕಾರ್ಯಗಳನ್ನು ಪರಿಚಯಿಸಿದರು.
ಸಂಪತ್ ಶೆಟ್ಟಿ ಉಪಸ್ಥಿತರಿದ್ದರು. ವಿನೋದ್ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು. ಮೈಕಲ್ ಡಿಸೋಜ ವಂದಿಸಿದರು ಸಂಘದ ಅಧ್ಯಕ್ಷರಾದ ನ್ಯಾಯವಾದಿ ಶ್ರೀ ಗುರುಪ್ರಸಾದ್ ಭಟ್, ಸುನಿಲ್ ಜೋನಸ್, ಹಾಗೂ ಎಲ್ಲಾ ಪದಾಧಿಕಾರಿಗಳ
ಸಹಕಾರದೊಂದಿಗೆ ನೆರವೇರಿತು.
ಬೆಂಗಳೂರು ಶಾರ್ಜಾ ದುಬೈ ಮೊದಲಾದ ಕಡೆಗಳಿಂದ ಸಂಘದ ಸದಸ್ಯರು ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.