News Karnataka Kannada
Saturday, April 27 2024
ಬೀದರ್

ಬಿಸಿಲಿನ ತಾಪಕ್ಕೆ ಬೆಂದು , ಬಡವರ ಫ್ರಿಜ್’ಗಡಿಗೆ ಮೊರೆ ಹೋದ ಬೀದರ್ ಜನತೆ

The people of Bidar resorted to the fringes of the poor, braving the heat of the sun.
Photo Credit : News Kannada

ಬೀದರ್‌: ಗಡಿ‌ ಜಿಲ್ಲೆ ಬೀದರ್‌ನಲ್ಲಿ‌ ಬಿಸಿಲಿನ ತಾಪಮಾನ ದಿನದಿಂದ‌ ದಿನಕ್ಕೆ ಏರಿಕೆ ಆಗ್ತಾ ಇದ್ದು, ಜನರು ತಂಪು ನೀರು ಸೇವಿಸಲು ಬಡವರ ಪ್ರಿಡ್ಜ್ ಅಂತಲೆ ಕರೆಸಿಕೊಳ್ಳುವ ಗಡಿಗೆಗಳನ್ನು ಖರೀದಿಸಲು ಮುಂದಾಗಿದ್ದಾರೆ.

ಪ್ರಿಡ್ಜ್‌ನಲ್ಲಿರುವ ನೀರನ್ನ ಸೇವಿಸಿದರೆ, ಪದೇ ಪದೇ ನೀರಡಿಕೆ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಹೀಗಾಗಿ ಜನ್ರು ಮಣ್ಣಿನ ಗಡಿಗೆಗಳಿಗೆ ಖರೀದಿಸಲು ಮುಂದಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.

ಗಡಿಗೆಗಳಿಗೆ ಈಗ ಬೇಡಿಕೆ ಕೂಡಾ ಹೆಚ್ಚಾಗಿದೆ. ಇದರಿಂದ ಗಡಿಗೆ ಮೌಲ್ಯ ಹೆಚ್ಚಾಗಿದ್ದು, ಅಳತೆಗೆ ತಕ್ಕಂತೆ ಗಡಿಗೆಗಳ ಮೌಲ್ಯವನ್ನ ನಿಗದಿ‌ ಪಡಿಸಿ ನಗರದ ವಿವಿದ ಕಡೆಗಳಲ್ಲಿ ಮಾರುತ್ತಿದ್ದಾರೆ. ನಗರದ ನೆಹರು ಮೈದಾನ, ನೌಬಾದ್ ಸೇರಿದಂತೆ ವಿವಿಧ ಕಡೆಗಳಲ್ಲಿ ಗಡಿಗಳನ್ನ ಮಾರಾಟಕ್ಕಿದ್ದು, 250 ರಿಂದ 300 ರೂಪಾಯಿವರೆಗೆ ಗಡಿಗೆ ದರ ನಿಗದಿಗೊಳಿಸಿ ಮಾರಾಟ ಮಾಡ್ತಿದ್ದಾರೆ.

ಇನ್ನು ಗಡಿಗೆ ಕೊಳ್ಳಲು‌ ಬರುವಂತ ವ್ಯಕ್ತಿಗಳು ಸಹ ಗಡಿಗೆ ನೀರು ಸೇವಿಸುವುದು ಆರೋಗ್ಯಕರವಾಗಿದ್ದು, ಪ್ರಿಡ್ಜ್‌ನಲ್ಲಿರಿಸಿದ ಪಾನೀಯಗಳನ್ನ ಸೇವಿಸೊದರಿಂದ ರೋಗ ರುಜಿನಗಳು ಬರುವ ಸಂಭವವಿರುತ್ತೆ. ಅಷ್ಟೇ ಅಲ್ಲದೇ ಪ್ರಿಡ್ಜ್‌ನಲ್ಲಿನ ನೀರು ಸೇವಿಸಿದರೆ ಮತ್ತೆ ಮತ್ತೆ ನೀರಡಿಕೆ‌ ಆಗುತ್ತದೆ ಆದರೆ ಗಡಿಗೆಯಲ್ಲಿನ‌ ನೀರು ಬಾಯಾರಿಕೆ ಹೋಗಲಾಡಿಸುತ್ತೆ. ಹಾಗಾಗಿ ಗಡಿಗೆ ನೀರು ಸೇವಿಸುವುದು ಉತ್ತಮ ಹಾಗಾಗಿ ಗಡಿಗೆ ಖರೀದಿ‌ ಮಾಡ್ತಿದ್ದೇವೆ ಎನ್ನುತ್ತಿದ್ದಾರೆ ಜನರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು