ಮಂಗಳೂರು: ಶ್ರಾವಣ ಮಾಸ ಪ್ರಾರಂಭವಾಗಿದ್ದು ಹಿಂದೂಗಳ ಹಬ್ಬಗಳು ಪ್ರಾರಂಭವಾಗಿವೆ. ಕೃಷ್ಣ ಜನ್ಮಾಷ್ಟಮಿ, ಗಣೇಶೋತ್ಸವ ಹಾಗು ದಸರಾ ಹಬ್ಬಗಳು ಭಕ್ತಿಯಿಂದ ಆಚರಿಸುವಂತಹದ್ದು, ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮತ್ತು ಮೆರವಣಿಗೆಗಳಲ್ಲಿ ಡಿಜೆಗಳು ಮತ್ತು ವಿಚಿತ್ರ ಕರ್ಕಶ ಹಾಡುಗಳಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟುಮಾಡುತ್ತದೆ.
ಹಾಗಾಗಿ ಇಂತಹ ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಡಿಜೆಗಳನ್ನು ಮತ್ತು ವಿಚಿತ್ರ ಹಾಡುಗಳನ್ನು ಹಾಕುವುದನ್ನು ನಿಲ್ಲಿಸಲು ಕ್ರಮಕೈಗೊಳ್ಳಬೇಕೆಂದು ಹಾಗು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯಾವುದೇ ಕರ್ಕಶ ವಿಚಿತ್ರ ಹಾಡುಗಳಿಗೆ ಮತ್ತು ಡಿಜೆಗಳಿಗೆ ಯಾವುದೇ ಅನುಮತಿ ನೀಡಬಾರದೆಂದು ಪೊಲೀಸ್ ಆಯುಕ್ತರಲ್ಲಿ ಮನವಿ ಮಾಡುತ್ತಿದ್ದೇವೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷರಾದ ಗೋಪಾಲ್ ಕುತ್ತಾರ್ ತಿಳಿಸಿದರು.