ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತೃತ್ವದ ಬಂಟ್ವಾಳ ಮಂಡಲ ಬಿಜೆಪಿ ವತಿಯಿಂದ ” ಗ್ರಾಮವಿಕಾಸ ಯಾತ್ರೆ” ” ಗ್ರಾಮದೆಡೆಗೆ ಶಾಸಕರ ನಡಿಗೆ ” 10 ನೇ ದಿನದ ಪಾದಯಾತ್ರೆ ಜ.23 ರಂದು ಕಾರಿಂಜೇಶ್ವರ ಸನ್ನಿಧಿಯಿಂದ ಆರಂಭವಾಯಿತು.
ಜ.22 ರಂದು ಸಿದ್ದಕಟ್ಟೆಯಲ್ಲಿ ಸಭಾ ಕಾರ್ಯಕ್ರಮ ಸಮಾಪನಗೊಂಡ ಬಳಿಕ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬಿಜೆಪಿ ಕಾರ್ಯಕರ್ತ ಪ್ರವೀಣ್ ಪಡಂತ್ರಬೆಟ್ಟು ಅವರ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು. ಇಂದು ಬೆಳಿಗ್ಗೆ ನೂರಾರು ಕಾರ್ಯಕರ್ತರ ಜೊತೆಯಲ್ಲಿ ಇತಿಹಾಸ ಪ್ರಸಿದ್ದ ಶ್ರೀ ಕಾರಿಂಜೇಶ್ವರ ದೇವಾಲಯಕ್ಕೆ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ರಾಜ್ಯ ನೀರು ಸರಬರಾಜು ಹಾಗೂ ಒಳಚರಂಡಿ ನಿಗಮದ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್, ಬಂಟ್ವಾಳ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಂಟ್ವಾಳ ಬಿಜೆಪಿ ಪ್ರಮುಖರಾದ ಡೊಂಬಯ ಅರಳ, ರಮನಾಥ ರಾಯಿ, ಚಿದಾನಂದ ರೈ, ಸುದರ್ಶನ್ ಬಜ, ಹರೀಶ್ ಪ್ರಭು,ಶಾಂತಪ್ಪ ಪೂಜಾರಿ,ವಸಂತ ಅಣ್ಣಳಿಕೆ, ಸುರೇಶ್ ಕೋಟ್ಯಾನ್ ಧನಂಜಯ ಶೆಟ್ಟಿ, ಕಾವಳಮೂಡೂರು ಗ್ರಾ.ಪಂ. ಆದ್ಯಕ್ಷೆ ಜಯಲಕ್ಷ್ಮೀ , ಉಪಾಧ್ಯಕ್ಷ ಅಜಿತ್ ಶೆಟ್ಟಿ, ಸದಸ್ಯ ರಾದ ಪ್ರಶಾಂತ್ ಶೆಟ್ಟಿ, ರಾಜ್ ಗೋಪಾಲ್, ಗಣೇಶ್ ದೇವಾಡಿಗ, ಶೇಷಗಿರಿ, ವೀಣಾ , ರೇವತಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಸಮಿತಿ ಸದಸ್ಯರಾದ ಅನಂದ ಶೆಟ್ಟಿ ಶೆಡ್ಮೆ, ಪ್ರವೀಣ್ ಪೂಜಾರಿ, ರಾಘವೇಂದ್ರ ನಾಯ್ಕ್, ಸುಮನಾ ಎಳಚಿತ್ತಾಯ , ಮಾಲತಿ ಉಪಾಧ್ಯಾಯ, ಪ್ರಮುಖರಾದ ವೆಂಕಟರಮಣ ಮುಚ್ಚಿನ್ನಾಯ, ಗಣಪತಿ ಮುಚ್ಚಿನ್ನಾಯ, ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, ಜಿನೇಂದ್ರ ಜೈನ್, ಶರ್ಮಿತ್ ಜೈನ್, ಮೋಹನ್ ಆಚಾರ್, ತಿಮ್ಮಪ್ಪ ಶೆಟ್ಟಿ , ರಾಜರಾಮ್ ನಾಯಕ್ , ಸತೀಶ್ ಶಿವಪ್ಪ ಗೌಡ ನಿನ್ನಿಕಲ್ಲು, ರಾಮಕೃಷ್ಣ ಮಯ್ಯ, ಸಂತೋಷ್ ರಾಯಿಬೆಟ್ಟು,ಸುಪ್ರೀತ್ ಆಳ್ವ, ಚರಣ್ ಜುಮಾದಿಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.