ಉಳ್ಳಾಲ: ಹಲವು ದಾಖಲೆಗೆ ಸಾಕ್ಷಿಯಾಗಲಿರುವ ವಿಶ್ವ ಸಾಂಸ್ಕøತಿಕ ಜಾಂಬೂರಿಯಲ್ಲಿ ದಿನವೊಂದಕ್ಕೆ 60 ಸಾವಿರಕ್ಕೂ ಹೆಚ್ಚು ಮಂದಿಗೆ ಊಟೋಪಚಾರ ಆಗಬೇಕಾಗಿದ್ದು, ಸ್ಕೌಟ್ಸ್ ಗೈಡ್ಸ್ ನಲ್ಲಿರುವ ನಮ್ಮ ಮಕ್ಕಳ ಕಾರ್ಯಕ್ರಮಕ್ಕೆ ಉಳ್ಳಾಲ ತಾಲೂಕಿನಿಂದ ಅಧಿಕಾರಿಗಳು ಸ್ವತಃ ತಾವೇ ಮುಂದೆ ನಿಂತು ಗರಿಷ್ಠ ಆಹಾರ ಸಾಮಾಗ್ರಿಗಳ ಸಂಗ್ರಹದ ಗುರಿಯನ್ನು ಇಟ್ಟು ಸಂಚಯನ ಮಾಡಬೇಕು ಎಂದು ಶಾಸಕ ಯು.ಟಿ. ಖಾದರ್ ಅಭಿಪ್ರಾಯಪಟ್ಟರು
ಅಂಬಿಕಾರೋಡ್ ಗಟ್ಟಿ ಸಮಾಜ ಭವನದಲ್ಲಿ ಉಳ್ಳಾಲ ತಾಲೂಕು ಸಮಿತಿಯ “ವಿಶ್ವ ಜಾಂಬೂರಿ” ಸಮಾಲೋಚನಾ ಸಭೆಯಲ್ಲಿ ಡಿ. 18ರಂದು ಕಲ್ಲಾಪು ಯುನಿಟಿ ಸಭಾಂಗಣದಲ್ಲಿ ವಠಾರದಿಂದ ಉಳ್ಳಾಲ ತಾಲೂಕಿನ ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆಯ ಸಂಗ್ರಹದ ವಿಚಾರದಲ್ಲಿ ಮಾತನಾಡಿದರು.
ಉಳ್ಳಾಲ ತಾಲೂಕು ವ್ಯಾಪ್ತಿಯ ಉಳ್ಳಾಲ ನಗರ ಸಭೆ, ಕೋಟೆಕಾರ್ ಪಟ್ಟಣ ಪಂಚಾಯತ್, ಸೋಮೇಶ್ವರ ಪುರಸಭೆ ಅಧಿಕಾರಿಗಳು, ಗ್ರಾಮ ಪಂಚಾಯತ್ನ ಅಭಿವೃದ್ಧಿ ಅ„ಕಾರಿಗಳು, ಅಧ್ಯಕ್ಷರು ಪ್ರಮುಖರು ಸಭೆಯಲ್ಲಿ ಪಾಲ್ಗೊಂಡು ತಮ್ಮ ತಮ್ಮ ವ್ಯಾಪ್ತಿಯಲ್ಲಾದ ತಯಾರಿ ಸಂಗ್ರಹದ, ಹೊರೆಕಾಣಿಕೆಯ ಕುರಿತು ಮಾಹಿತಿ ನೀಡಿದರು.
ಸಮಿತಿ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಮಾತನಾಡಿ, ವಿಶ್ವ ಜಾಂಬೂರಿಗೆ ಸರ್ವ ಸಿದ್ದತೆಗಳು ನಡೆಯುತ್ತಿದೆ, ಇದೆಲ್ಲವನ್ನು ಸ್ವತಃ ನೋಡಿಯೇ ತಿಳಿಯಬೇಕು, 18 ತಾರೀಕಿನಂದು ಕಲ್ಲಾಪು ಯುನಿಟಿ ಸಭಾಂಗಣದ ವಠಾರದಿಂದ ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆ ನಡೆಯಲಿದೆ, ಅಷ್ಟರ ಒಳಗೆ ಎಲ್ಲರೂ ತಮ್ಮ ಸಂಗ್ರಹ, ದೇಣಿಗೆ ನೀಡಿ ಸಹಕಾರ ನೀಡಬೇಕು ಎಂದು ತಿಳಿಸಿದರು.
ಹೊರೆಕಾಣಿಕೆ ಸಮಿತಿ ಸಂಚಾಲಕ ಸತೀಶ್ ಕುಂಪಲ, ಸಮಿತಿ ಕಾರ್ಯಾಧ್ಯಕ್ಷ ಚಂದ್ರಹಾಸ್ ಅಡ್ಯಂತಾಯ, ಕೋಶಾಧಿಕಾರಿ ಚಂದ್ರಹಾಸ್ ಶೆಟ್ಟಿ, ಸಮಿತಿಯ ಪ್ರಮುಖರು ಭರತ್ ರಾಜ್ ಶೆಟ್ಟಿ ಪಜೀರ್, ರವೀಂದ್ರ ರೈ ಕಲ್ಲಿಮಾರ್, ಸುರೇಶ್ ಭಟ್ನಗರ್, ತಾಲೂಕು ಮುಖ್ಯಾಧಿಕಾರಿ ರಾಜಣ್ಣ, ಉಳ್ಳಾಲ ನಗರಸಭಾ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್, ಆಯುಕ್ತರು ವಿದ್ಯಾ ಕಾಳೆ, ಕೋಟೆಕಾರ್ ಪಟ್ಟಣ ಪಂಚಾಯತ್ ಮುಖ್ಯಾ„ಕಾರಿ ಮಾಲಿನಿ, ಸೋಮೇಶ್ವರ ಪುರಸಭಾ ಮುಖ್ಯಾ„ಕಾರಿ ಮತ್ತಡಿ, ಕುರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ನಾಯಕ್, ಹರೇಕಳ ಗ್ರಾಮ ಪಂಚಾಯತ್ ಅಧ್ಯಕ್ಷ ಬದ್ರುದ್ಧೀನ್, ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಲ್ಪ್ರೆಡ್ ಡಿಸೋಜ, ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು. ತ್ಯಾಗಂ ಹರೇಕಳ ಸ್ವಾಗತಿಸಿ, ನಿರೂಪಿಸಿದರು.