News Karnataka Kannada
Thursday, May 09 2024
ಮಂಗಳೂರು

ಮಂಗಳೂರು: ಬಿಜೆಪಿಯವರಿಗೆ ಸೇರಿದ ಬೀಫ್ ಫ್ಯಾಕ್ಟರಿ ಮುಚ್ಚಿಸಲು ಸರ್ಕಾರಕ್ಕೆ ತಾಕತ್ತಿದೆಯೇ- ಖಾದರ್

Mangaluru: Does the government have the capacity to close down 11 beef factories belonging to the BJP?
Photo Credit : News Kannada

ಮಂಗಳೂರು: ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯು.ಟಿ. ಖಾದರ್, “ಇಂದಿರಾ ಗಾಂಧಿ ಅವರು ಗೋಹತ್ಯೆಯ ಕುರಿತು ಇಡೀ ದೇಶಕ್ಕೇ ಕಾನೂನೊಂದನ್ನು ಜಾರಿಗೊಳಿಸಿದ್ದರು. ಆದರೆ ಇದೀಗ ಬಿಜೆಪಿ ಸರ್ಕಾರ ಒಂದೊಂದು ಕಾನೂನನ್ನು ಜಾರಿಗೊಳಿಸುತ್ತಿದೆ. ಇಡೀ ದೇಶಕ್ಕೆ ಮಾದರಿಯಾಗುವ ಕಾನೂನನ್ನು ದಿಲ್ಲಿಯಲ್ಲಿ ಕುಳಿತವರಿಗೆ ಯಾರ ಭಯವಿದೆ’’ ಎಂದು ಪ್ರಶ್ನಿಸಿದರು.

ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, “ಸೆಂಟ್ರಲ್ ಮಾರುಕಟ್ಟೆಯಲ್ಲಿ ಬೀಫ್ ಸ್ಟಾಲ್‌ಗಳನ್ನು ಆರಂಭಿಸುವ ವಿಚಾರ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಸಂಬಂಧಿಸಿದ್ದು. ಇದರ ಬಗ್ಗೆ ಅವರು ಕಾನೂನು ಕ್ರಮ ಕೈಗೊಳ್ಳಲಿ” ಎಂದು ತಿಳಿಸಿದರು

“ಗೋವುಗಳ ಬಗ್ಗೆ ಮಾತನಾಡುವ ಬಿಜೆಪಿ ಸರ್ಕಾರ ಗೋ ಸಂತತಿಯನ್ನು ಹೆಚ್ಚಿಸಲು ಯಾವ ಕ್ರಮ ಕೈಗೊಂಡಿದೆ. ಕಾಂಗ್ರೆಸ್ ಸರಕಾರ ಪಶುಭಾಗ್ಯ ಯೋಜನೆಯನ್ನು ಜಾರಿಗೊಳಿಸಿ ದನ ಕರುಗಳನ್ನು ಉಚಿತವಾಗಿ ನೀಡಲಾಗಿತ್ತು. ಮೇವಿಗೆ ಹಣ ನೀಡಲಾಗಿತ್ತು. ಕೆಂಜಾರಿನ ಗೋಶಾಲೆನ್ನು ಕೆಡವಿಹಾಕಿ ಅಪರೂಪದ ಕಪಿಲ ತಳಿಯ ಗೋವುಗಳನ್ನು ಬೀದಿಪಾಲು ಮಾಡಿದಾಗ ಬಿಜೆಪಿಯವರಿಗೆ ಗೋವಿನ ಬಗ್ಗೆ ಕಾಳಜಿ ಇರಲಿಲ್ಲವೇ. ಅದರ ಶಾಪ‌ ಬಿಜೆಪಿಯವರಿಗೆ ತಟ್ಟದೆ ಇರುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಇಂದಿರಾ ಗಾಂಧಿ ಅವರು ಗೋಹತ್ಯೆಯ ಕುರಿತು ಇಡೀ ದೇಶಕ್ಕೇ ಕಾನೂನೊಂದನ್ನು ಜಾರಿಗೊಳಿಸಿದ್ದರು. ಆದರೆ ಇದೀಗ ಬಿಜೆಪಿ ಸರ್ಕಾರ ಒಂದೊಂದು ಕಾನೂನನ್ನು ಜಾರಿಗೊಳಿಸುತ್ತಿದೆ. ಇಡೀ ದೇಶಕ್ಕೆ ಮಾದರಿಯಾಗುವ ಕಾನೂನನ್ನು ದಿಲ್ಲಿಯಲ್ಲಿ ಕುಳಿತವರಿಗೆ ಯಾರ ಭಯವಿದೆ” ಎಂದು ಖಾದರ್ ಪ್ರಶ್ನಿಸಿದರು.

ಸತೀಶ್ ಜಾರಕಿಹೊಳಿ ಹೇಳಿಕೆಗೆ ಆಕ್ಷೇಪ

‘ಹಿಂದೂ ಎಂಬುದು ಅಶ್ಲೀಲ ಪದ’ ಇದು ಸತೀಶ್ ಜಾರಕಿಹೊಳಿಯವರ ವೈಯಕ್ತಿಕ ಹೇಳಿಕೆ. ಇದನ್ನು ಅವರು ಪಕ್ಷದ ವೇದಿಕೆಯಲ್ಲಿ ಎಲ್ಲೂ ಹೇಳಿದ್ದಲ್ಲ. ಆದರೆ ಯಾರಿಗೂ ವೈಯುಕ್ತಿಕವಾಗಿ ನೋವು ಆಗುವಂತಹ ಹೇಳಿಕೆಯನ್ನು ಯಾರೂ ಹೇಳಬಾರದು. ಈ ಬಗ್ಗೆ ಪಕ್ಷದ ಅಧ್ಯಕ್ಷರು ಪ್ರತಿಕ್ರಿಯೆ ನೀಡಿದ್ದಾರೆ ಎಂದು ಖಾದರ್ ಹೇಳಿದರು.

ರಾಜ್ಯ ಸರ್ಕಾರದ ಜನ ಸಂಕಲ್ಪ ಯಾತ್ರೆ. ಇದು ಜನ ಸಂಕಲ್ಪ ಯಾತ್ರೆ ಅಲ್ಲ ಇದು ಜನ ಸಂಕಟ ಯಾತ್ರೆ. ಜನ್ರ ಮುಂಗಡ ಪತ್ರದಲ್ಲಾಗಲಿ ಹೇಳಿದ ಯಾವುದೇ ಆಶ್ವಾಸನೆ ಈಡೇರಿಸಿಲ್ಲ. ಸರ್ಕಾರದ ವೈಫಲ್ಯ ಮರೆಮಾಚಲು ಈ ಯಾತ್ರೆ‌ ಎಂದು ಕಿಡಿಕಾರಿದ್ದಾರೆ.

ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದೆ. ಡಬಲ್ ಇಂಜಿನ್ ಸರ್ಕಾರಕ್ಕೆ ರಸ್ತೆಯ ಒಂದು ಗುಂಡಿ ಮುಚ್ಚಲು ಸಾಧ್ಯವಾಗದ ಪರಿಸ್ಥಿತಿ. ನಮ್ಮ ಕ್ಷೇತ್ರಕ್ಕೆ ಈ‌ ಭಾರಿ ಗುಂಡಿ ಮುಚ್ಚಲು ೫ ಲಕ್ಷ ಕೊಟ್ಟಿದೆ. ಡಬಲ್ ಇಂಜಿನ್ ಸರ್ಕಾರದ ಇಂಜಿನ್ ಕೆಟ್ಟು ಹೋಗಿದೆ‌. ಡಬಲ್ ಇಂಜಿನ್ ಕೇವಲ ಸೈಲೆನ್ಸರ್ ಮಾತ್ರ ವರ್ಕ್ ಆಗ್ತಾ ಇದೆ. ಜನ್ರನ್ನು ಸರ್ಕಸ್ ಮುಂದೆ ಕುಳ್ಳಿರಿಸಿದಂತಾಗಿದೆ‌. ಜನ್ರಿಗೆ ಡಬಲ್ ಇಂಜಿ ಸರ್ಕಾರ ಏನ್ ಮಾಡ್ತಾ ಇದೆ ಗೊತ್ತಿಲ್ಲ ಎಂದರು.

ಮೀನುಗಾರಿಗೆ ಸಾವಿರ ಮನೆ ನೀಡ್ತೇವೆ ಹೇಳಿದ್ರು. ಮೀನುಗಾರಿಗೆ ಬಿಜೆಪಿ ಮಾಡಿದಷ್ಟು ಮೋಸ ಯಾರು ಮಾಡಿಲ್ಲ. ಅವರಿಗೆ ಬಿಜೆಪಿ‌ ಮೋಸ ಮಾಡ್ತಾ ಇದೆ‌ ಎಂದು ಖಾದರ್ ಹೇಳಿದರು.

ವೆನ್ಲಾಕ್ ಆಸ್ಪತ್ರೆಯಲ್ಲಿ ಮೆಮೊಗ್ರಾಂ ಸ್ಥಾಪನೆ ವಿಚಾರ ಮಾತನಾಡಿದ ಅವರು, ಇಲ್ಲಿ ನಾನು ಪ್ರಾರಂಭ ಮಾಡಿದ ಎಂಆರ್ ಐ ಯೇ ಇಲ್ಲ. ಇನ್ನೂ ಮೆಮೊಗ್ರಾಂ ಸ್ಥಾಸ್ಥಾಪನೆಯಂತೆ…! ಎಂದು ಕಿಡಿಕಾರಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು