ಮಡಿಕೇರಿ: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಮಾಳೇಟಿರ ಬಿ. ಕಾವೇರಪ್ಪ ಅವರಿಗೆ ಮಂಗಳೂರು ವಿಶ್ವ ವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಇವರು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಮಾಧವ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಕೊಡಗಿನ ಕೃಷಿ ಸಂಸ್ಕೃತಿ” ಎಂಬ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ.
ಕಾವೇರಪ್ಪ ಅವರು ಕೆದಮುಳ್ಳೂರು ಗ್ರಾಮದ ದಿ. ಮಾಳೇಟಿರ ಬಿದ್ದಪ್ಪ ಮತ್ತು ಪೂವಮ್ಮ ದಂಪತಿಯ ಹಿರಿಯ ಪುತ್ರ.