News Karnataka Kannada
Monday, May 06 2024
ಮಂಗಳೂರು

ಮಂಗಳೂರು ಸ್ಫೋಟದ ಬೆನ್ನಲ್ಲೇ ‘ಸುಸೈಡ್ ಬಾಂಬ್’ ಬಗ್ಗೆ ಟ್ವೀಟ್ ಮಾಡಿದ್ದ ಝಾಕಿರ್ ನಾಯ್ಕ್

After Mangalore blasts, Zakir Naik tweeted about 'suicide bomb'
Photo Credit : News Kannada

ಮಂಗಳೂರು: ಮಂಗಳೂರು ಸ್ಫೋಟದ ಉಗ್ರ ಶಾರಿಕ್ ಗೆ ಭಾರತದಿಂದ ವಿದೇಶಕ್ಕೆ ಓಡಿ ಹೋಗಿ ತಲೆಮರೆಸಿಕೊಂಡಿರುವ ಇಸ್ಲಾಂ ಧರ್ಮ ಪ್ರವಚನಕಾರ ಝಾಕಿರ್ ನಾಯ್ಕ್ ಸ್ಫೂರ್ತಿ ಎಂಬ ವಿಚಾರ, ತನಿಖೆಯಲ್ಲಿ ತಿಳಿದುಬಂದಿದೆ. ಶಂಕಿತ ಉಗ್ರ ಶಾರೀಕ್ ನಿಂದ ವಶಪಡಿಸಿಕೊಳ್ಳಲಾಗಿರುವ ಮೊಬೈಲ್ ಫೋನ್ ನಲ್ಲಿ, ಝಾಕಿರ್ ನಾಯ್ಕ್ ಪ್ರವಚನಗಳುಳ್ಳ ಸುಮಾರು 50ಕ್ಕೂ ಹೆಚ್ಚು ವೀಡಿಯೋಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಅಷ್ಟೇ ಅಲ್ಲ, ರಿಪಬ್ಲಿಕ್ ಭಾರತ್ ಎಂಬ ಜಾಲತಾಣ ನೀಡಿರುವ ವರದಿಯ ಪ್ರಕಾರ, ಮಂಗಳೂರು ಸ್ಫೋಟ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಝಾಕಿರ್ ನಾಯ್ಕ್ ಕೂಡ ಟ್ವೀಟ್ ಮಾಡಿ, ಇಸ್ಲಾಂನಲ್ಲಿ ಆತ್ಯಹತ್ಯಾ ದಾಳಿ ಸಮ್ಮತವೇ ಎಂಬ ಪ್ರಶ್ನೆಯನ್ನಿಟ್ಟುಕೊಂಡು ಖುದ್ದು ನಾಯ್ಕು ಮಾಡಿರುವ ಯೂ ಟ್ಯೂಬ್ ವಾಹಿನಿಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾನೆ.

ಮಂಗಳೂರು ಸ್ಫೋಟ ನ. 19ರ ಸಂಜೆ 4:29ಕ್ಕೆ ನಡೆದಿದ್ದರೆ, ಝಾಕಿರ್ ನ ಟ್ವೀಟ್ ಸಂಜೆ 6:13ಕ್ಕೆ ಪ್ರಕಟವಾಗಿದೆ. ಇಂಥ ಹಲವಾರು ವಿಡಿಯೋಗಳು ಅದಾಗಲೇ ಶಾರಿಕ್ ಮೊಬೈಲ್ ನಲ್ಲಿ ಪತ್ತೆಯಾಗಿವೆ. ಈ ವಿಡಿಯೋಗಳು ಶಾರಿಕ್ ನನ್ನು ಉಗ್ರವಾದ ಕೃತ್ಯಕ್ಕೆ ಪ್ರೇರೇಪಿಸಿರಬಹುದೇ ಎಂದು ಹೇಳಲಾಗಿದೆ.

ಮಂಗಳೂರು ಸ್ಫೋಟದ ಬೆನ್ನಲ್ಲೇ ಝಾಕಿರ್ ನಾಯ್ಕ್ ಟ್ವೀಟ್ ಮಾಡಿರುವುದು ಬೆಳಕಿಗೆ ಬರುತ್ತಿದ್ದಂತೆ, ಕೇಂದ್ರ ಸರ್ಕಾರ ಈ ಎರಡಕ್ಕೂ ನಂಟಿದೆಯೇ ಎಂಬುದರ ಬಗ್ಗೆ ಮತ್ತೊಂದು ಸುತ್ತಿನ ತನಿಖೆಯನ್ನು ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ. ಹಾಗೆ ನಂಟಿರುವುದು ಕಂಡುಬಂದರೆ, ಭಾರತದಲ್ಲಿ ಝಾಕಿರ್ ನಾಯ್ಕ್ ಹಾಗೂ ಆತನಿಗೆ ಸಂಬಂಧಿಸಿದ ಸಂಘ- ಸಂಸ್ಥೆಗಳ ಮೇಲೆ ಮತ್ತಷ್ಟು ನಿಗಾ ಇಡಬಹುದು ಎಂದು ಮೂಲಗಳು ಹೇಳಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು