ಮಂಗಳೂರು: ಮಂಗಳೂರು ಮಿಲಾಗ್ರಿಸ್ ವಿದ್ಯಾ ಸಂಸ್ಥೆ ಹಾಗೂ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಯೋಗದಲ್ಲಿ ಅಧ್ಯಾಪಕರಿಗಾಗಿ 07.11.2022 ರಂದು ಪುನಶ್ವೇತನಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನ ಸಂತ ಜೋಸೆಫ್ ಯೂನಿವರ್ಸಿಟಿ ಸ್ಕೂಲ್ ಆಫ್ ಹ್ಯೂಮನಿಟಿಸ್ ನ ಡೀನ್ ಆಗಿರುವ ಪ್ರೊ. ಕ್ಲಮೆಂಟ್ ಡಿ ಸೋಜಾ ಇವರು “ಟೀಚರ್ ಆಸ್ ಟ್ರಾನ್ಸ್ ಫಾರ್ಮ್ಯಾಟಿವ್ ಲೀಡರ್” ಎಂಬ ವಿಷಯದ ಮೇಲೆ ಮಾತಾಡಿ ಶಿಕ್ಷಕರು ತಮ್ಮ ವೃತ್ತಿ ಜೀವನದಲ್ಲಿ ಎದುರಿಸುತ್ತಿರುವ ಪ್ರಸ್ತುತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅವುಗಳಿಗೆ ಪರಿಹಾರೋಪಾಯಗಳನ್ನು ತಿಳಿಸಿಕೊಟ್ಟರು.
ಗೌರವನ್ವಿತ ಅತಿಥಿ ಯಾಗಿ ಸಂತ ಅಲೋಶಿಯಸ್ ವಿದ್ಯಾ ಸಂಸ್ಥೆ ಯ ಪ್ರಾಂಶುಪಾಲರಾದ ಡಾ ಫರಿಟ ವೆಗಸ್ ಇವರು ಮಾತನಾಡಿ ಶಿಕ್ಷಕರು ತಮ್ಮ ವ್ಯಕ್ತಿ ತ್ವವನ್ನು ಧನಾತ್ಮಕವಾಗಿ ರೂಪಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳ ಮೇಲೆ ಅದ್ಭುತ ಪರಿಣಾಮ ಬೀರಲು ಸಾಧ್ಯ ಎಂದು ಹೇಳಿದರು.
ಕಾಲೇಜಿನ ಸಂಚಾಲಕ ರೆ| ಫಾ| ಬೊನವೆಂಚರ್ ನಝರತ್, ಉಪ ಪ್ರಾಂಶುಪಾಲರಾದ ಕ್ಯಾಸಿನ್ ರೋಡ್ರಿಗೆಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕಿ ಶ್ರಾವ್ಯ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕಿ ಕಾರ್ತಿಕಾ ವಂದಿಸಿದರು.