ಪುತ್ತೂರು: ಹೊಟ್ಟೆ ನೋವೆಂದು ಚೇತನಾ ಆಸ್ಪತ್ರೆಗೆ ಚಿಕಿತ್ಸೆಗೆ ಬಂದ ಯುವಕ ಸಾವು ಸಾವನ್ನಪ್ಪಿದ್ದಾನೆ. ಸುಳ್ಯದ ಪೈಚಾರ್ ಶಾಂತಿನಗರ ನಿವಾಸಿ ಸೃಜಿತ್(17) ಮೃತ ಯುವಕ ಶನಿವಾರದಂದು ಚಿಕಿತ್ಸೆಗೆ ಪುತ್ತೂರಿನ ಚೇತನಾ ಆಸ್ಪತ್ರೆಗೆ ಯುವಕ ದಾಖಲಾಗಿದ್ದ.
ವೆಂಟಿಲೇಟರ್ ನ ವ್ಯವಸ್ಥೆ ಇಲ್ಲದೆ ಪುತ್ತೂರಿನ ಖ್ಯಾತ ವೈದ್ಯರು ಯುವಕನಿಗೆ ಶಸ್ತ್ರಚಿಕಿತ್ಸೆ ಮಾಡಿದ್ದರು. ಬಳಿಕ ಶಸ್ತ್ರಚಿಕಿತ್ಸೆ ಮಾಡಿ ರಾತ್ರಿ ವೇಳೆ ಯುವಕ ಗಂಭೀರ ಎಂದು ಹೇಳಿ ಮಂಗಳೂರು ಕರೆದುಕೊಂಡು ಹೋಗಿ ಎಂದು ವೈದ್ಯರು ತಿಳಿಸಿದ್ದಾರೆ.
ಆದರೆ ಆಸ್ಪತ್ರೆಯ ವೈದ್ಯರ ಬೇಜವಾಬ್ದಾರಿಯಿಂದ ಯುವಕ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಲಾಗಿದೆ. ಹೀಗಾಗಿ ವೈದ್ಯಾಧಿಕಾರಿಗಳ ಬೇಜವಾಬ್ದಾರಿ ಖಂಡಿಸಿ ನಾಗರೀಕರು, ಮೃತ ಯುವಕನ ಶವವನ್ನ ಆಸ್ಪತ್ರೆ ಮುಂದಿಟ್ಟು ಪ್ರತಿಭಟನೆ ನಡೆಸಿದ್ಧಾರೆ.
ಅಲ್ಲದೇ ಶಸ್ತ್ರಚಿಕಿತ್ಸೆ ಮಾಡಿ ಲೋಪವೆಸಗಿದ ಖ್ಯಾತ ವೈದ್ಯರನ್ನ ಬಂಧಿಸಲು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಈ ಸಂಬಂಧ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.