News Karnataka Kannada
Thursday, May 09 2024
ಬೆಂಗಳೂರು

ಜೈನ ಮುನಿ ಹತ್ಯೆ ಕೇಸ್: ಆರೋಪಿ ಮಗನ ಕೃತ್ಯ ನೆನೆದು ಭಾವುಕರಾದ ತಂದೆ

jainmuni murder case
Photo Credit : By Author

ಬೆಂಗಳೂರು: ಬೆಳಗಾವಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಹಸನ್​ನ ತಂದೆ ಇಂದು ತನ್ನ ಮಗನ ಕೃತ್ಯ ನೆನೆದು ಭಾವುಕರಾಗಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ನಾರಾಯಣ ಮಾಳಿ ಮತ್ತು ಎರಡನೇ ಆರೋಪಿ ಹಸನಸಾಬ್ ದಲಾಯತ್ ಪೊಲೀಸ್ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆ ಇಬ್ಬರನ್ನು ಬೆಳಗಾವಿ ಜೈಲಿಗೆ ಕರೆದೊಯ್ಯುತ್ತಿದ್ದಾರೆ. ಹೀಗಾಗಿ ಮಗ ಹಸನ್ ಭೇಟಿಗೆ ಬಂದಿದ್ದೇನೆ ಎಂದ ತಂದೆ ಮಕ್ಬೂಲ್ ಹೇಳಿದ್ದಾರೆ. ನಾನು ಬೇರೆಯವರ ಗದ್ದೆಯಲ್ಲಿ ಕಸ ತಗೆದು ಜೀವನ ಮಾಡುತ್ತೇನೆ. ಮಗ ಹೀಗೆ ಮಾಡಿದರೆ ಏನ್ ಮಾಡುವುದು ಹೇಳಿ, ದುಡಿದು ತಿನ್ನೋ ಮನುಷ್ಯ ನಾನು.

ನಾರಾಯಣ ಮಾಳಿ ಜೊತೆ ಹಸನ್​ಗೆ ಮೂರ್ನಾಲ್ಕು ವರ್ಷದ ಗೆಳೆತನವಿತ್ತು. ಹೊಲಕ್ಕೆ ಕೀಟನಾಶಕ ಸಿಂಪಡನೆ ಮಾಡಲು ಹೋಗುತ್ತಿದ್ದೇನೆ ಅಂತಾ ಅಂದು ರಾತ್ರಿ ಹೋಗಿದ್ದ. ಈ ವೇಳೆ ಅವರು  ವೇತನ ಕೊಡಲ್ಲ ಹೋಗಬೇಡ ಅಂತಾ ಹಸನ್​​ ಪತ್ನಿ ಹೇಳಿದ್ದಳು. ಆದರೆ ಈಕೆಯ ಮಾತನ್ನೂ ಲೆಕ್ಕಿಸದೆ ಹೋಗಿದ್ದ. ಮನೆಗೆ ವಾಪಸ್ ಬಂದಾಗಲೂ ನಮಗೆ ಏನೂ ಹೇಳಿರಲಿಲ್ಲ. ರಾತ್ರಿ 10 ಗಂಟೆಗೆ ಪೊಲೀಸರು ಬಂದಾಗ ವಿಚಾರ ಗೊತ್ತಾಯಿತು  ಎಂದು ಭಾವುಕರಾದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು