ಬೆಂಗಳೂರು: ಬೆಳಗಾವಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಹಸನ್ನ ತಂದೆ ಇಂದು ತನ್ನ ಮಗನ ಕೃತ್ಯ ನೆನೆದು ಭಾವುಕರಾಗಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ನಾರಾಯಣ ಮಾಳಿ ಮತ್ತು ಎರಡನೇ ಆರೋಪಿ ಹಸನಸಾಬ್ ದಲಾಯತ್ ಪೊಲೀಸ್ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆ ಇಬ್ಬರನ್ನು ಬೆಳಗಾವಿ ಜೈಲಿಗೆ ಕರೆದೊಯ್ಯುತ್ತಿದ್ದಾರೆ. ಹೀಗಾಗಿ ಮಗ ಹಸನ್ ಭೇಟಿಗೆ ಬಂದಿದ್ದೇನೆ ಎಂದ ತಂದೆ ಮಕ್ಬೂಲ್ ಹೇಳಿದ್ದಾರೆ. ನಾನು ಬೇರೆಯವರ ಗದ್ದೆಯಲ್ಲಿ ಕಸ ತಗೆದು ಜೀವನ ಮಾಡುತ್ತೇನೆ. ಮಗ ಹೀಗೆ ಮಾಡಿದರೆ ಏನ್ ಮಾಡುವುದು ಹೇಳಿ, ದುಡಿದು ತಿನ್ನೋ ಮನುಷ್ಯ ನಾನು.
ನಾರಾಯಣ ಮಾಳಿ ಜೊತೆ ಹಸನ್ಗೆ ಮೂರ್ನಾಲ್ಕು ವರ್ಷದ ಗೆಳೆತನವಿತ್ತು. ಹೊಲಕ್ಕೆ ಕೀಟನಾಶಕ ಸಿಂಪಡನೆ ಮಾಡಲು ಹೋಗುತ್ತಿದ್ದೇನೆ ಅಂತಾ ಅಂದು ರಾತ್ರಿ ಹೋಗಿದ್ದ. ಈ ವೇಳೆ ಅವರು ವೇತನ ಕೊಡಲ್ಲ ಹೋಗಬೇಡ ಅಂತಾ ಹಸನ್ ಪತ್ನಿ ಹೇಳಿದ್ದಳು. ಆದರೆ ಈಕೆಯ ಮಾತನ್ನೂ ಲೆಕ್ಕಿಸದೆ ಹೋಗಿದ್ದ. ಮನೆಗೆ ವಾಪಸ್ ಬಂದಾಗಲೂ ನಮಗೆ ಏನೂ ಹೇಳಿರಲಿಲ್ಲ. ರಾತ್ರಿ 10 ಗಂಟೆಗೆ ಪೊಲೀಸರು ಬಂದಾಗ ವಿಚಾರ ಗೊತ್ತಾಯಿತು ಎಂದು ಭಾವುಕರಾದರು.