ಮಂಗಳೂರು: ನ್ಯೂಸ್ಕನ್ನಡ.ಕಾಮ್ ‘ಹಾಡು ಸಂತೋಷಕ್ಕೆ ಸೀಸನ್ 2ʼ ಸಂಗೀತ ಕಾರ್ಯಕ್ರಮ ಹೊಸ ವರ್ಷದ ಸಂಭ್ರಮಕ್ಕೆ ಮೆರುಗನ್ನು ನೀಡಲಿದೆ. ʼಹೊಸ ವರುಷ ನವ ಹರುಷʼ ವಿಶೇಷ ಸಂಗೀತ ರಸಸಂಜೆ ಡಿಸೆಂಬರ್ 30 ಗುರುವಾರ ಸಂಜೆ 7.00 ಕ್ಕೆ ಪ್ರಸಾರವಾಗಲಿದೆ.
ಖ್ಯಾತ ಗಾಯಕರಾದ ರಮೇಶ್ಚಂದ್ರ ಮತ್ತು ಸೌಮ್ಯ ಭಟ್ ಕಟೀಲ್ ಧ್ವನಿ ನೀಡಲಿದ್ದು, ಕೀಬೋರ್ಡ್ ಮಾಂತ್ರಿಕ ಗುರುರಾಜ್, ರಿದಂ ಪ್ಯಾಡ್ ಮೋಡಿಗಾರ ವಾಮನ್ ಕುಮಾರ್ ಮತ್ತು ತಬಲ ಗಾರುಡಿಗ ರಾಜೇಶ್ ಭಾವತ್ ಸಾಥ್ ನೀಡಲಿದ್ದಾರೆ. ಕೃಷ್ಣಪ್ರಸಾದ್ ಕಾರ್ಯಕ್ರಮವನ್ನು ನಿರೂಪಿಸುವರು.
ಹಾಡು ಸಂತೋಷಕ್ಕೆ ಸೀಸನ್ 2ʼ ಸರಣಿ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಮಂಗಳೂರಿನ ಖ್ಯಾತ ಚೇರ್ ಸ್ಟುಡಿಯೊ ವಹಿಸಿದ್ದು, ಕ್ವಿಕ್ ಅಕೌಂಟಿಂಗ್ ಅಡ್ವೈಸರಿ ಎಲ್ಎಲ್ಸಿ, ಅಬುಧಾಬಿ, ರೀಗಲ್ ಫರ್ನಿಷಿಂಗ್ ಎಂಡ್ ಸ್ಟೊರೇಜ್ ಎಲ್ಎಲ್ಸಿ ಅಬುಧಾಬಿ, ಸ್ಟೋರ್ಜ್ & ಡಾಕ್ಸ್ ಆಫೀಸ್ ಇಕ್ವಿಪ್ಮೆಂಟ್ ಟ್ರೇಡಿಂಗ್ ಎಲ್ಎಲ್ಸಿ ದುಬೈ, ಎಟಿಎಸ್ ಗ್ರೂಪ್ ಆಫ್ ಕಂಪನೀಸ್, ಖತಾರ್ ಹಾಗೂ ಮಂಗಳೂರಿನ ಎಲೆಕ್ಟ್ರಿಕಲ್ ಪಾಯಿಂಟ್ ಸಹಪ್ರಾಯೋಜಕರಾಗಿದ್ದಾರೆ.