ಮಂಗಳೂರು: ನ್ಯೂಸ್ ಕರ್ನಾಟಕ. ಕಾಮ್ ಮತ್ತು ನ್ಯೂಸ್ ಕನ್ನಡ. ಕಾಮ್ ನ ‘ಹಾಡು ಸಂತೋಷಕ್ಕೆ’ ಸೀಸನ್ 2 ಕಾರ್ಯಕ್ರಮವು ಫೆಬ್ರವರಿ 12 ರ ಶನಿವಾರದಂದು ಸಂಜೆ 7.00 IST ಕ್ಕೆ ವಿಶೇಷವಾಗಿ ಪ್ರಸಾರವಾಗಲಿದೆ.
ಖ್ಯಾತ ಗಾಯಕ ಸಂದೇಶ್ ನೀರುಮಾರ್ಗ ಮುಖ್ಯ ಗಾಯಕರಾಗಿ ಭಾಗವಹಿಸಲಿದ್ದಾರೆ.ಇವರೊಂದಿಗೆ ಖ್ಯಾತ ಗಾಯಕಿ ವಿದ್ಯಾ ಸುವರ್ಣ ಆಗಮಿಸಲಿದ್ದಾರೆ.ಕೀಬೋರ್ಡ್ ದೀಪಕ್ ಜಯಶೀಲನ್, ಪ್ಯಾಡ್ ವಾಮನ್ ಕುಮಾರ್ ಬೈಲೂರು ಮತ್ತು ತಬಲಾವನ್ನು ರಾಜೇಶ್ ಭಾಗವತ್ ನುಡಿಸಲಿದ್ದಾರೆ. ಕಾರ್ಯಕ್ರಮದ ನಿರ್ವಹಣೆಯನ್ನು ಆರ್ಜೆ ಪ್ರಸನ್ನ ವಹಿಸಲಿದ್ದಾರೆ.
ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಅಬುಧಾಬಿಯ ರೀಗಲ್ ಫರ್ನಿಶಿಂಗ್ಸ್ & ಸ್ಟೋರೇಜ್ ಸಿಸ್ಟಮ್ಸ್ ಎಲ್ ಎಲ್ ಸಿ ವಹಿಸಿಕೊಂಡಿದ್ದು, ಕ್ವಿಕ್ ಅಕೌಂಟಿಂಗ್ ಮತ್ತು ಅಡ್ವೈಸರಿ ಎಲ್ ಎಲ್ ಸಿ, ಅಬುಧಾಬಿ, ಸ್ಟೋರ್ಸ್ ಮತ್ತು ಡಾಕ್ಸ್ ಆಫೀಸ್ ಎಕ್ವಿಪ್ಮೆಂಟ್ ಟ್ರೇಡಿಂಗ್ ಎಲ್ ಎಲ್ ಸಿ, ದುಬೈ ಮತ್ತು ಎಲೆಕ್ಟ್ರಿಕಲ್ ಪಾಯಿಂಟ್ ಮಂಗಳೂರು ಇವರು ಸಹ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದಾರೆ.