ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವಾಗಲೂ ಬರಿಗಾಲಿನಲ್ಲಿಯೇ ನಡೆದು ಹರೇಕಳ ಹಾಜಬ್ಬ ಅವರು ಪ್ರಶಸ್ತಿ ಸ್ವೀಕರಿಸಿದ್ದರು. ಹಾಜಬ್ಬ ಅವರ ಸರಳತೆ ಕಂಡು ಲೋಕವೇ ಮೂಕವಿಸ್ಮಿತವಾಗಿತ್ತು. ಹಾಜಬ್ಬ ಅವರ ಸರಳತೆಗೆ ಮತ್ತೊಂದು ಉದಾಹರಣೆ ಎನಿಸುವ ವಿಡಿಯೋವೊಂದು ಇದೀಗ ವೈರಲ್ ಆಗಿದೆ.
ದಕ್ಷಿಣ ಕನ್ನಡದಲ್ಲಿ ನಡೆದ ಕಾಯಕ್ರಮವೊಂದರಲ್ಲಿ ಪದ್ಮಶ್ರೀ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲು ಆಹ್ವಾನ ನೀಡಲಾಗಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ಹಾಜಬ್ಬ ಅವರನ್ನು ಕೂರಿಸಿ ಸನ್ಮಾನಿಸಲು ಸಿಂಹಾಸನವೊಂದನ್ನು ತರಿಸಲಾಗಿತ್ತು. ಎಲ್ಲರಂತೆ ಸಾದಾ ಕುರ್ಚಿಯಲ್ಲಿ ಕುಳಿತಿದ್ದ ಹಾಜಬ್ಬ ಅವರನ್ನು ಎಬ್ಬಿಸಿ ಸಿಂಹಾಸನದ ಮೇಲೆ ಉಪಸ್ಥಿತರಾಗಲು ಕೇಳಿಕೊಳ್ಳಲಾಯ್ತು. ಈ ವೇಳೆ ಹಾಜಬ್ಬ ಅವರು ಮಾತ್ರ ʼಕೈ ಮುಗಿದು ಬೇಡ, ನಾನು ಇದೇ ಕುರ್ಚಿಯಲ್ಲಿ ಕೂರುತ್ತೇನೆʼ ಎಂದು ಹೇಳಿದ್ದಾರೆ.
ಒಬ್ಬರಲ್ಲ, ಮೂರ್ನಾಲ್ಕು ಮಂದಿ ಹಾಜಬ್ಬ ಅವರ ಮನವೊಲಿಸಲು ಪ್ರಯತ್ನ ಮಾಡಿದರೂ ಹಾಜಬ್ಬ ಅವರು ʼನನಗೆ ಇಂಥದ್ದೇನು ಬೇಡ, ಈಗಾಗಲೇ ಕುಳಿತಿರುವ ಸಾದಾ ಕುರ್ಚಿಯೇ ಸಾಕುʼ ಎಂದು ಅಲ್ಲಿಯೇ ಕುಳಿತಿದ್ದಾರೆ.
ಇವರ ಮಾತಿಗೆ ಮನ್ನಣೆ ನೀಡಿ ಸಾದಾ ಕುರ್ಚಿಯ ಮೇಲೆಯೇ ಕೂರಿಸಿ ಸನ್ಮಾನಿಸಲಾಗಿದೆ. ಪದ್ಮಶ್ರೀ ಪ್ರಶಸ್ತಿ ನಂತರವೂ ಒಂದು ಚೂರು ಆಡಂಬರ ತೋರಿಸದ ಇವರು ಯಾವಾಗಲೂ ಸರಳ ಹೃದಯ ಶ್ರೀಮಂತ. ಅಲ್ಲಿ ನೆರೆದಿದ್ದ ಮಂದಿ ಕೂಡ ಇವರ ಸರಳತೆಯನ್ನು ಮೆಚ್ಚಿ ಕೊಂಡಾಡಿದ್ದಾರೆ.
Recently wen there was a felicitation program held for Padma Shri recipient Harekala Hajabba in Dakshina Kannada District he refused to sit in a Raja Chair but opted to sit in a normal chair. Such Simplicity…😌🙏 pic.twitter.com/vRClXYcL9F
— Adarsh Hegde (Modi Ka Parivar) (@adarshahgd) November 25, 2021