ಬೆಳ್ತಂಗಡಿ : ಶ್ರೀ ಕ್ಷೇತ್ರ ಸೌತಡ್ಕದ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಪ್ರತಿ ವರ್ಷ ಮಾಘ ಶುದ್ಧ ಚೌತಿಯಂದು ನಡೆಯುವ ಮೂಡಪ್ಪ ಸೇವೆಯು ಫೆ. 4 ರಂದು ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ .
ಆ ಪ್ರಯುಕ್ತ ಫೆ. 2 ರಂದು ಪೂರ್ವಾಹ್ನ 9.30 ರಿಂದ ರಾತ್ರಿ 8 ಗಂಟೆವರೆಗೆ ಭಜನೋತ್ಸವ,ಫೆ .3 ರಂದುಪೂರ್ವಾಹ್ನ 9.30 ರಿಂದ ರಾತ್ರಿ 9.30 ರ ವರೆಗೆ ಯಕ್ಷಭಾರತಿ ಸಂಯೋಜನೆಯಲ್ಲಿ “ಯಕ್ಷೋತ್ಸವ” ಹಾಗು ಫೆ. 4 ರಂದು ಬೆಳಿಗ್ಗೆ ಮಹಾಗಣಪತಿ ದೇವರಿಗೆ 108 ಕಾಯಿ ಗಣಹೋಮ ಮತ್ತು ಪಂಚಾಮೃತಾಭಿಷೇಕ ಮತ್ತು ಸಂಜೆ 7 ರಿಂದ ಮೂಡಪ್ಪ ಸೇವೆ ನಡೆಯಲಿದ್ದು ಭಕ್ತಾದಿಗಳು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ ರಾವ್ ಮುಂದ್ರುಪ್ಪಾಡಿ ತಿಳಿಸಿದ್ದಾರೆ.