ಮಂಗಳೂರು: ಬಿಜೆಪಿ ಸರ್ಕಾರದ ಅವಧಿಯ ಎಲ್ಲಾ ಹಗರಣಗಳ ತನಿಖೆಗೆ ಒಳಪಡಿಸಿದ್ದೇವೆ ಎಂದು ಕೆ.ಪಿ.ಸಿ.ಸಿ ವಕ್ತಾರ ಎಂ ಲಕ್ಷ್ಮಣ್ ಮೈಸೂರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್, ಕೋವಿಡ್, ಪಿಎಸ್ಐ ಹಗರಣ ತನಿಖೆಗೆ ಒಳಪಡಿದ್ದೇವೆ. ಡಿಸೆಂಬರ್ ಅಂತ್ಯದವರೆಗೆ ಸಮಯಾವಕಾಶ ನೀಡಿದ್ದೇವೆ. ಮೂರು ತಿಂಗಳು ಸಮಯ ಕೊಡಬೇಕಲ್ವಾ. ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆ ನಡೆಯುತ್ತಿದೆ. ಕಾಂಗ್ರೆಸ್ ನವರು ನಾವು ಏನು ಹೇಳ್ತೆವೆ ಅದನ್ನು ಮಾಡ್ತೇವೆ.
ಸುಳ್ಳು ಹೇಳುವ ವ್ಯವಸ್ಥೆ ಏನಿದ್ರು ಬಿಜೆಪಿ ಜೆಡಿಎಸ್ ನವರದ್ದು.ಅದರಲ್ಲಿ ಪಿ.ಎಚ್.ಡಿ ಮಾಡಿದ್ದಾರೆ.ನಾವು ಇನ್ನು ಪ್ರಾಥಮಿಕ ಶಾಲೆಯಲ್ಲಿ ಇದ್ದೇವೆ. ತನಿಖೆಯನ್ನು ಸಹಿಸಲು ಸಾಧ್ಯವಾಗದೆ ಬಿಜೆಪಿ ಜೆಡಿಎಸ್ ನವರು ಮೈಮೇಲೆ ಚೇಳು ಬಿಟ್ಕೊಂಡವರಾಗೆ ಮಾಡ್ತಿದ್ದಾರೆ.
ಸಿಟಿ ರವಿಯವರ ಮೇಲೆ ಮಾಡಿರುವ ಆರೋಪದ ಬಗ್ಗೆ ತನಿಖೆಗೆ ನೀಡಿದ್ದೇವೆ.ಅವರು ಸಹ ನನ್ನ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ್ದಾರೆ. ಸಿಟಿ ರವಿಯವರ ಕಥೆ ಏನಾಗಿದೆ ಎಂದು ಎಲ್ರಿಗೂ ಗೊತ್ತಿದೆ. ಸಿಟಿ ರವಿಯನ್ನು ಬಿಜೆಪಿಯವರಯ ತುಳಿದು ಹಾಕಿದ್ರು.
ಸಿಟಿ ರವಿಯವರೇ ಪಶ್ಚತಾಪ ಪಡ್ತಿದ್ದಾರೆ. ಈ ರೀತಿ ಸಾಕಷ್ಟು ಜನರ ಕಥೆಯನ್ನು ಬಿಜೆಪಿ ಆರ್.ಎಸ್.ಎಸ್ ಮುಗಿಸಿದೆ. ಲಿಂಗಾಯತ ಸಮುದಾಯದಲ್ಲಿ ಎಲ್ಲರನ್ನು ಮುಗಿಸಿ ಆಯ್ತು.
ಅಶೋಕ್ ಅವರು ಆರ್ಥಿಕತೆ ಬಗ್ಗೆ ಯಾವತ್ತಾದ್ರೂ ಮಾತನಾಡಿದ್ದಾರ. ಇವತ್ತು ಸಿದ್ದರಾಮಯ್ಯ ನವರಿಗೆ ಶ್ವೇತ ಪತ್ರ ಹೊರಡಿಸಿ ಅಂತಿದ್ದಾರೆ. ಶ್ವೇತ್ರ ಪತ್ರ ನೂರಕ್ಕೆ ನೂರು ಹೊರಡಿಸುತ್ತೇವೆ. ಬಿಜೆಪಿಯವರು ಬಿಟ್ಟು ಹೋದ್ರಲ್ಲ ಅವತ್ತಿನ ಶ್ವೇತ ಪತ್ರ ಕೊಡ್ತೇವೆ. ಒಂದು ವಾರದಲ್ಲಿ ಸಿದ್ದರಾಮಯ್ಯನವರು ಬಿಡುಗಡೆ ಮಾಡ್ತಾರೆ ಎಂದು ಹೇಳಿದ್ದಾರೆ.