ಬೆಳ್ತಂಗಡಿ : ಮಣ್ಣಿನ ಹರಕೆಗೆ ಪ್ರಸಿದ್ಧವಾಗಿರುವ ತಾಲೂಕಿನ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು ಹಾಗೂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಶ್ರೀ ದೇವರ ದರ್ಶನ ಮಾಡಿ ಮಣ್ಣಿನ ರಚನೆಯ ಹರಕೆ ಒಪ್ಪಿಸಿದರು.
ಸತೀಶ್ಚಂದ್ರ ಸುರ್ಯಗುತ್ತು, ರಾಜಶೇಖರ ಅಜ್ರಿ, ಮುನಿರಾಜ ಅಜ್ರಿ, ಅಜಿತ್ ಅರಿಗ, ಗ್ರಾ.ಪಂ.ಅಧ್ಯಕ್ಷ ವಿಜಯ ಗೌಡ, ಜಯಂತ ಗೌಡ ಮತ್ತಿತರರು ಉಪಸ್ಥಿತರಿದ್ದರು. ದೇವಳದ ವತಿಯಿಂದ ಶಾಸಕರಿಬ್ಬರನ್ನು ಸನ್ಮಾನಿಸಲಾಯಿತು.